ರಾಜ್ಯ

ವಿದ್ಯುತ್ ಪರಿವರ್ತಕ ದುರಸ್ಥಿಗೆ ತೆರಳಿದ್ದ ಲೈನ್ ಮ್ಯಾನ್ ಗೆ ಶಾಕ್ …!

ಗದಗ prajakiran.com : ವಿದ್ಯುತ್ ಪರಿವರ್ತಕ ದುರಸ್ತಿಗೆ ತೆರಳಿದ್ದ ಲೈನ್ ಮ್ಯಾನ್ ಗೆ ಶಾಕ್  ಹೊಡೆದ ಘಟನೆ ಗದಗ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್ ನಲ್ಲಿ ಈ ರ್ದುಘಟನೆ ನಡೆದಿದ್ದು,  ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಹೆಸ್ಕಾಂ ಲೈನ್ ಮ್ಯಾನ್ ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪಟ್ಟಣದ ಸೇವಾಲಾಲ್ ನಗರದ  ನಿವಾಸಿಯಾಗಿರುವ ಹೆಸ್ಕಾಂ ಗಜೇಂದ್ರಗಡ ಶಾಖೆಯ ಲೈನ್ ಮ್ಯಾನ್ ವಿಠಲ್ ಮಾಳೋತ್ತರ (೨೮) ಅವರಿಗೆ ಸಂಕಷ್ಟಕ್ಕೆ ಸಿಲುಕಿದ ಲೈನ್ ಮ್ಯಾನ್ ಆಗಿದ್ದಾರೆ. ಅವರನ್ನು ಹೆಚ್ಚಿನ  ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆ ಗೆ ರವಾನಿಸಲಾಗಿದೆ. 

ಘಟನೆ ಹಿನ್ನೆಲೆ ; 

ಹೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಶುಕ್ರವಾರ ಸಂಜೆ ೪  ಸಮಯದಲ್ಲಿ  ಪಟ್ಟಣದ ದುರ್ಗಾದೇವಿ ದೇವಸ್ಥಾನದ ಎದುರಿಗೆ   ವಿದ್ಯುತ್ ಪರಿವರ್ತಕ ದುರಸ್ಥಿಗೆ ತೆರಳಿದ್ದಾರೆ.

ಈ ವೇಳೆ ವಿದ್ಯುತ್ ಹರಿವನ್ನು ಸ್ತಗಿತಗೊಳಿಸಲಾಗಿತ್ತು. ವಿದ್ಯುತ್ ಕಂಬವೇರಿ ಪರಿವರ್ತಕವನ್ನು ಪರಿಶೀಲಿಸುವ ವೇಳೆ ತಂತಿಯಲ್ಲಿ ವಿದ್ಯುತ್ ಪ್ರಹರಿಸಿದ ಪರಿಣಾಮ ಲೈನ್ ಮ್ಯಾನ್  ಕಂಬದಲ್ಲಿ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಗಂಭೀರ ಗಾಯವಾಗಿದ್ದಾರೆ.

ಬಳಿಕ ಸ್ಥಳೀಯರ ಸಹಾಯದಿಂದ   ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *