ಹುಬ್ಬಳ್ಳಿ prajakiran.com ;
ನಿನ್ನೆ ಸಿಎಂ ಬಿಎಸ್ ವೈ ದೆಹಲಿಗೆ ಹೋಗಿ ಬಂದಿದ್ದಾರೆ. ಜ. 13 ಇಲ್ಲವೇ 14 ರಂದು ಸಂಪುಟ ವಿಸ್ತರಣೆ ಆಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದರು.
ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
7 ಜನರು ಸಚಿವರು ಅಗಲಿದ್ದಾರೆ. ಸದ್ಯ ರಾಜ್ಯಸರ್ಕಾರದ 7 ಸಚಿಚ ಸ್ಥಾನಗಳು ಖಾಲಿ ಇವೆ. ಹೀಗಾಗಿ ಎಳು ಜನರು ಸಚಿವರಾಗಲಿದ್ದಾರೆ ಎಂದರು.
ಸಂಪುಟದಿಂದ ಯಾರನ್ನ ಕೈ ಬಿಡಲಿದ್ದಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಡಿಸಿಎಂ
ಮುಂದೆ ಯಾರಿಗಾದ್ರು ಸ್ಥಾನ ನೀಡುವಾಗ ಅವಾಗ ಸಂಪುಟ ಪುನರಚನೆ ಆಗುವ ಸಾಧ್ಯತೆ ಇದೆ ಎಂದು ಸಮಜಾಯಿಷಿ ನೀಡಿದರು.
ಬಹಳ ದಿನಗಳಿಂದ ಸಂಪುಟ ವಿಸ್ತರಣೆ ಬಾಕಿಯಿತ್ತು.
ಅದನ್ನ ಹೈಕಮಾಂಡ ಗಮನಿಸಿ ಇದೀಗ ಅವಕಾಶ ಕಲ್ಪಿಸಿದೆ ಎಂದರು.
ಸಂಕ್ರಾಂತಿ ಗೆ ಎಲ್ಲವೂ ಒಳ್ಳೆಯದು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯತ್ನಾಳ ಹೇಳಿದ ಹಾಗೆ ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೆ ಕೇಳಬೇಕು ಎಂದು ನುಣುಚಿಕೊಂಡ ಡಿಸಿಎಂ ಲಕ್ಷ್ಮಣ ಸವದಿ
ವಿರೋಧ ಪಕ್ಷದವರು ಕೇವಲ ಗೊಂದಲ ಸೃಷ್ಠಿ ಮಾಡುತ್ತಾರೆ.
ಸದ್ಯ ಸಂಪುಟ ಪುನಾರಚನೆ ಇಲ್ಲ ಎಂದು ಸುಳಿವು ನೀಡಿದರು.