ರಾಜ್ಯ

ಕೆ ಐ ಎ ಡಿ ಬಿ ಬಹುಕೋಟಿ ಹಗರಣ : ಶಂಕರ್ ತಳವಾರ್, ಬ್ಯಾಂಕ್ ಮ್ಯಾನೇಜರ್ ಸೇರಿ ಹಲವರ ಡ್ರೀಲ್ ಮಾಡಿದ ಸಿಐಡಿ ಅಧಿಕಾರಿಗಳ ತಂಡ

ಧಾರವಾಡ ಪ್ರಜಾಕಿರಣ.ಕಾಮ್  : ಕೆ ಐ ಎ ಡಿ ಬಿಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಕೆ ಐ ಎ ಡಿ ಬಿ ಹಿರಿಯ ಸಹಾಯಕ ಶಂಕರ್ ತಳವಾರ್, ಹುಬ್ಬಳ್ಳಿಯ ಐ ಡಿ ಬಿ ಐ ಉಣಕಲ್ ಶಾಖೆಯ ಬ್ಯಾಂಕ್ ಮ್ಯಾನೇಜರ್, ಸಹಾಯಕ ಮ್ಯಾನೇಜರ್ ಸೇರಿ ಹಲವರನ್ನು ಸಿಐಡಿ ಅಧಿಕಾರಿಗಳ ತಂಡ ಡ್ರೀಲ್ ಮಾಡಿ ಮಹತ್ವದ ದಾಖಲೆ ಹಾಗೂ ಮಾಹಿತಿಯನ್ನು ಸಂಗ್ರಹಿಸಿದೆ.

ಉಣಕಲ್ ಶಾಖೆಯ ಐ ಡಿ ಬಿ ಐ ಬ್ಯಾಂಕ್ ನಲ್ಲಿ ಏಳಕ್ಕೂ ಖಾತೆ ತೆಗೆದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದರು ಎನ್ನಲಾಗಿದೆ.

ಹೀಗಾಗಿ ಸಿಐಡಿ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಧಾರವಾಡದಲ್ಲಿಯೇ ಬಿಡಾರ ಹೂಡಿ ತನಿಖೆ ಚುರುಕುಗೊಳಿಸಿದ್ದಾರೆ.

ಧಾರವಾಡದ ಕೆ ಐ ಎ ಡಿ ಬಿ ಯ ಹಿರಿಯ ಸಹಾಯಕ ಶಂಕರ್ ತಳವಾರನನ್ನು ಬಲೆಗೆ ಕೆಡವಿದ ಬೆನ್ನಲ್ಲೇ ಆತ ಹೃದಯ ನೋವು ಎಂದು ಹೇಳಿ ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದ.

ಅಷ್ಟೇ ಅಲ್ಲದೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದ‌.

ಆ ಬಳಿಕ ಆತ ಇತ್ತೀಚೆಗೆ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲನಿಯ ಬಳಿಯ ಬಾರ್ ವೊಂದಕ್ಕೆ ಮದ್ಯ ಖರೀದಿಸಲು ತೆರಳಿದ್ದ ಎಂಬ ಮಾತು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಅವರು ಆತನಿಗೆ ಮತ್ತೆ ಎರಡನೇ ಬಾರಿ ಕರೆದು ಡ್ರೀಲ್ ಮಾಡಿದ್ದರು.

ಸಿ ಐ ಡಿ ತನಿಖೆ ನಡೆದಿದ್ದರೂ ಈವರೆಗೂ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಎಂ.ಕೆ. ಸಿಂಪಿ, ಶಂಕರ ತಳವಾರ, ಹೇಮಚಂದ್ರ ಚಿಂತಾಮಣಿ ಸೇರಿದಂತೆ 14 ಜನರ ಪೈಕಿ ಯಾರೊಬ್ಬರೂ ಕೂಡ ಈವರೆಗೂ ಸಿಐಡಿ ಯಿಂದ ಬಂಧನವಾಗಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಕೂಡ ಜೂನ್ 30ಕ್ಕೆ ಹೋಗಿದೆ.

ಆದರೆ, ಶೀಘ್ರದಲ್ಲಿಯೇ ಸಿಐಡಿ ಹಲವರ ಹೆಡೆಮುರಿ ಕಟ್ಟುವುದಂತೂ ಕಟು ಸತ್ಯ. ತನಿಖೆ ನಡೆಯುತ್ತಿದೆ ಎಂದು ಸಿ ಐ ಡಿ ಇನ್ಸಪೆಕ್ಟರ್ ಎಲ್. ಆರ್. ಅಗ್ನಿ ಪ್ರಜಾಕಿರಣ.ಕಾಮ್ ಸಂರ್ಪಕಿಸಿದಾಗ ಖಚಿತಪಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *