ಧಾರವಾಡ ಪ್ರಜಾಕಿರಣ.ಕಾಮ್ : ಪ್ರತಿಷ್ಠಿತ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅಂದರೆ ಈಗಿನ ರಾಣಿ ಚೆನ್ನಮ್ಮ ಮೈದಾನದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆಗೆ
ಧಾರವಾಡ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಚಿನ್ ಮುಗದಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಅವರ ಪರವಾಗಿ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿಮಠ ಹಾಗೂ ಶಿವರಾಜ ಬೆಳ್ಳಕ್ಕಿ ಪ್ರಬಲ ವಾದ ಮಂಡಿಸಿದ್ದರು.
ಯಾವುದೇ ರೀತಿಯ ಅವಕಾಶ ನೀಡಬಾರದು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು.
ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆ ಕುರಿತು ಮಹಾನಗರ ಪಾಲಿಕೆ ಕೈಗೊಂಡ ನಿರ್ಣಯವನ್ನು ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯವರು ಇಂದು ಧಾರವಾಡ ಹೈಕೋರ್ಟನಲ್ಲಿ ಸಲ್ಲಿಸಿದ ಮೇಲ್ಮನವಿಯನ್ನ ಘನವೆತ್ತ ಉಚ್ಚನ್ಯಾಯಾಲಯ ಅವರ ಮೇಲ್ಮನವಿಯನ್ನು ತಿರಸ್ಕರಿಸಿದೆ.
ಇದರಿಂದಾಗಿ ಅವಳಿನಗರದ ಜನತೆಯು ಗಣಪತಿಯ ಮೇಲಿಟ್ಟ ಭಕ್ತಿಭಾವದ ಪ್ರತೀಕ ಹಾಗು ವಿಘ್ನ ನಿವಾರಕ ಶ್ರೀ ಗಣೇಶನ ಪ್ರತಿಷ್ಠಾಪನೆ ಮತ್ತೊಮ್ಮೆ ರಾಣಿ ಚೆನ್ನಮ್ಮ ಮೈದಾನದಲ್ಲಿ ವಿಜ್ರಂಭಣೆಯಿಂದ ಜರುಗಲಿದ್ದು ಮಹಾನಗರ ಪಾಲಿಕೆ ಠರಾವು ಅನುಮೋದಿಸುವ ಮೂಲಕ ಸ್ಥಳಿಯ ಗಣೇಶೋತ್ಸವದ ಸಮಿತಿಗೆ ಬಹುನಿರೀಕ್ಷಿತ ಗಣೇಶ ಪ್ರತಿಷ್ಠಾಪನೆಗೆ ಅನುವು ಮಾಡಿಕೊಡಲಾಗಿದೆ.
ಸದರಿ ಕಾರ್ಯಕ್ಕೆ ಶ್ರಮಿಸಿ ಗಣೇಶ ಪ್ರತಿಷ್ಠಾಪನೆಗೆ ಹಗಲಿರುಳು ಹೋರಾಟ ನಡೆಸಿದ ಹಾಗೂ ಮಾರ್ಗದರ್ಶನ ನೀಡಿದ ಕೇಂದ್ರ ಸಚಿವರು ಆದ ಧಾರವಾಡ ಲೋಕಸಭಾ ಸದಸ್ಯರಾದ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಹಾಗೂ ಪಾಲಿಕೆ ಸದಸ್ಯರು ನ್ಯಾಯವಾದಿಗಳಿಗೆ ಮತ್ತು ವಿಶೇಷವಾಗಿ ಗಣೇಶ ಭಕ್ತಾದಿಗಳಿಗೆ ಮಾಜಿ ಮೇಯರ ಈರೇಶ ಅಂಚಟಗೇರಿ ಅವರು ಅಭಿನಂದಿಸಿದ್ದಾರೆ.