ಮೈಸೂರು prajakiran.com : ಮೈಸೂರಿನಲ್ಲಿ ಮತ್ತೇ ರಾಜಕೀಯ ಕದನ ಆರಂಭವಾಗಿದೆ. ಮಾಜಿ ಸಚಿವ ಸಾ.ರಾ ಮಹೇಶ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್. ವಿಶ್ವನಾಥ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಒಬ್ಬರ ಆಕ್ಟಿಂಗ್ ಇನ್ನೊಬ್ಬರು ಅಧಿಕೃತ ಉಸ್ತುವಾರಿ ಸಚಿವರು ಎಂದು ಎಸ್ ಟಿ. ಸೋಮಶೇಖರ ಹಾಗೂ ಹೆಚ್. ವಿಶ್ವನಾಥ ವಿರುದ್ದ ಗುಡುಗಿದ್ದಾರೆ.
ಅಲ್ಲದೆ, ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಕೇವಲ ಒಂಬತ್ತ ತಿಂಗಳಿಗೆ ಅಬಕಾರಿ ಡಿಸಿಯನ್ನ ಯಾವ ಕಾರಣಕ್ಕೆ ವರ್ಗ ಮಾಡಲಾಗಿದೆ ಎಂದು ಗುಡುಗಿದ್ದಾರೆ.
ಹಣಕಾಸಿನ ವ್ಯವಹಾರ ಜಿಲ್ಲಾ ಉಸ್ತುವಾರಿಸಚಿವರಿಗೆ ಗೊತ್ತಿಲ್ಲದೆ ಆಗಿರಬಹುದು. ತ್ಯಾಗ ಮಾಡಿಬಿಟ್ಟಿವೆ. ನಮ್ಮ ತ್ಯಾಗದಿಂದಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಕುಟುಕಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ, ನನಗೆ ಗೊತ್ತಿಲ್ಲದೆ. ಯಾವ ವರ್ಗಾವಣೆ ನಡೆದಿಲ್ಲ. ಇದೆಲ್ಲಾ ನೂರಕ್ಕೆ ನೂರು ಸುಳ್ಳು. ರಾಜಕೀಯ ಪ್ರೇರಿತ ಆರೋಪ ಎಂದು ಟೀಕಿಸಿದರು.
ಒಟ್ಟಾರೆ ಹಳ್ಳಿಹಕ್ಕಿ ಹೆಚ್. ವಿಶ್ವನಾಥ ಗೂಡಿಗೆ ಮತ್ತೇ ಮಾಜಿ ಸಚಿವ ಸಾ.ರಾ. ಮಹೇಶ ಕದನ ಕುತೂಹಲ ಕೆರಳಿಸಿದೆ.