ರಾಜ್ಯ

ಬೀದಿಬದಿ ಹೆರಿಗೆಯಾದ ಆಕಳು, ಕರು ರಕ್ಷಣೆ ಮಾಡಿದ ಯುವ ಉದ್ಯಮಿ

ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರದಲ್ಲಿ ಬೀದಿಬದಿ ಹೆರಿಗೆಯಾಗಿ ಮಳೆಯಲ್ಲಿ ಸಿಲುಕಿ ನರಳುತ್ತಿದ್ದ ಆಕಳು, ಕರುವನ್ನು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯರ ನೆರವು ಕೋರಿದರೆ ಯಾರೊಬ್ಬರು ಸಹಾಯ ಹಸ್ತ ಚಾಚದ ಹಿನ್ನಲೆಯಲ್ಲಿ ಬೇಸತ್ತು ತಮ್ಮ ಹೋಟೆಲ್ ಹೋಗಿ ಬಿಸಿ ನೀರು ಕಾಯಿಸಿ ತಂದು ಆಕಳ ಮೈ ತೊಳೆದು ಆರೈಕೆ ಮಾಡಿದ್ದಾರೆ.

ಆನಂತರ ಹಲವು ಗಂಟೆಗಳ ಕಾಲ ಅದರ ಮೂಲ ಮಾಲೀಕರನ್ನ ಶೋಧ ಮಾಡಿ ಅವರನ್ನು ಕರೆದು  ಸುರಕ್ಷಿತವಾಗಿ ಹೆರಿಗೆಯಾದ ಆಕಳು ಹಾಗೂ ಕರುವನ್ನು ಹಸ್ತಾಂತರ ಮಾಡಿದ್ದಾರೆ.

ಆಕಳು ಹಾಗೂ ಕರುವನ್ನು ರಕ್ಷಣೆ ಮಾಡಿದಲ್ಲದೆ, ಆರೈಕೆ ಮಾಡಿದಕ್ಕೆ ಸ್ಥಳೀಯರು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಅವರ ಈ ಸಾಮಾಜಿಕ ಕಳಕಳಿಗೆ ನಮ್ಮ ಪ್ರಜಾಕಿರಣ.ಕಾಮ್ ದೊಂದು ಶುಭ ನಮನ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *