ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರದಲ್ಲಿ ಬೀದಿಬದಿ ಹೆರಿಗೆಯಾಗಿ ಮಳೆಯಲ್ಲಿ ಸಿಲುಕಿ ನರಳುತ್ತಿದ್ದ ಆಕಳು, ಕರುವನ್ನು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸ್ಥಳೀಯರ ನೆರವು ಕೋರಿದರೆ ಯಾರೊಬ್ಬರು ಸಹಾಯ ಹಸ್ತ ಚಾಚದ ಹಿನ್ನಲೆಯಲ್ಲಿ ಬೇಸತ್ತು ತಮ್ಮ ಹೋಟೆಲ್ ಹೋಗಿ ಬಿಸಿ ನೀರು ಕಾಯಿಸಿ ತಂದು ಆಕಳ ಮೈ ತೊಳೆದು ಆರೈಕೆ ಮಾಡಿದ್ದಾರೆ.
ಆನಂತರ ಹಲವು ಗಂಟೆಗಳ ಕಾಲ ಅದರ ಮೂಲ ಮಾಲೀಕರನ್ನ ಶೋಧ ಮಾಡಿ ಅವರನ್ನು ಕರೆದು ಸುರಕ್ಷಿತವಾಗಿ ಹೆರಿಗೆಯಾದ ಆಕಳು ಹಾಗೂ ಕರುವನ್ನು ಹಸ್ತಾಂತರ ಮಾಡಿದ್ದಾರೆ.
ಆಕಳು ಹಾಗೂ ಕರುವನ್ನು ರಕ್ಷಣೆ ಮಾಡಿದಲ್ಲದೆ, ಆರೈಕೆ ಮಾಡಿದಕ್ಕೆ ಸ್ಥಳೀಯರು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಅವರ ಈ ಸಾಮಾಜಿಕ ಕಳಕಳಿಗೆ ನಮ್ಮ ಪ್ರಜಾಕಿರಣ.ಕಾಮ್ ದೊಂದು ಶುಭ ನಮನ.