ಬೆಳಗಾವಿ prajakiran.com : ಯಾವುದೇ ಚುನಾವಣೆ ನಡೆದರೂ ದೊಡ್ಡ ಪಕ್ಷದಲ್ಲಿ ಟಿಕೆಟ್ಗಾಗಿ ಆಕಾಂಕ್ಷಿಗಳಿರುವುದು ಸಹಜ. ಟಿಕೆಟ್ ಕೇಳುವುದು ತಪ್ಪಲ್ಲ, ಅಷ್ಟಕ್ಕೂ ಇನ್ನೂ ರಾಜ್ಯ ಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದರು.
ಅವರು ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಹೇಳಿಕೆ ನೀಡಿದರು.
ಟಿಕೆಟ್ ವಿಷಯದಲ್ಲಿ ಪಕ್ಷ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತದೆ. ಉಮೇಶ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು. ಅದು ಪಕ್ಷದಲ್ಲಿ ಭಿನ್ನಮತ ಅಲ್ಲ ಎಂದು ಹೇಳಿದರು.
ಚಿಕ್ಕೋಡಿ ಲೋಕಸಭೆ ಚುನಾವಣೆ ನಡೆದಾಗ ನಾನೂ ಸಹ ಟಿಕೆಟ್ ಕೇಳಿದ್ದೆ. ಈಗ ರಾಜ್ಯಸಭೆ ಟಿಕೆಟ್ನ್ನು ರಮೇಶ ಕತ್ತಿ ಕೇಳುತ್ತಿದ್ದಾರೆ ಎಂದರು.
ದೊಡ್ಡ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಸಹಜ, ಈ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವಧಿ ಪೂರ್ಣಗೊಳಿಸುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಬಿಜೆಪಿಯಲ್ಲಿ ಗೊಂದಲ ಇದೆ, ಭಿನ್ನಮತ ಇದೆ ಎನ್ನುವುದು ಎಲ್ಲಾ ಸುಳ್ಳು ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಸಮರ್ಥಿಸಿಕೊಂಡರು.