ರಾಜ್ಯ

ಮಗಳನ್ನ ಹುಡುಕಿ ಕೊಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ತಂದೆ….!

ಧಾರವಾಡ prajakiran.com : ಕಳೆದು ಹೋದ ಮಗಳನ್ನ ಹುಡುಕಿ ಕೊಡುವಂತೆ ಒತ್ತಾಯಿಸಿ ತಂದೆಯೊಬ್ಬ ಪೊಲೀಸ್ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಮರೆವಾಡ ಗ್ರಾಮದ ಮುದ್ದಪ್ಪ ಜಂಗಳಿ ಎಂಬಾತನೇ ಧಾರವಾಡ ಮಹಿಳಾ ಠಾಣೆಯ ಮುಂದೆ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ತಂದೆ.

ನವೆಂಬರ್ 23ರಂದು ಮಗಳು ಕಾಣೆಯಾಗಿದ್ದು, ಇಲ್ಲಿಯವರೆಗೆ
ಹಲವು ಬಾರಿ ಬೇಡಿಕೊಂಡರು ಪೊಲೀಸರು ಹುಡುಕಿಕೊಡುವ ಪ್ರಯತ್ನವನ್ನೇ ಮಾಡುತ್ತಿಲ್ಲವೆಂದು ಮುದ್ದಪ್ಪ, ಹಾಗೂ ಆತನ ಪತ್ನಿ ಆರೋಪಿಸಿದರು.

ಮಗಳು ಬಸಮ್ಮನನ್ನು ಮಡ್ಡಿಗಿರಿಯಾಲ ಗ್ರಾಮದ ಗಂಗಪ್ಪ ಚುರಮರಿ ಎಂಬ ಯುವಕ ಅಪಹರಣ ಮಾಡಿದ್ದಾನೆಂದು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನ ಜರುಗಿಸಿಲ್ಲ ಎಂದು ಅಳಲುತೊಡಿಕೊಂಡರು.

ಠಾಣೆಯ ಮುಂದೆ ಜಮಾವಣೆಗೊಂಡ ಜನರು, ಮುದ್ದಪ್ಪ ಜಂಗಳಿಯನ್ನ ತಡೆಯುವ ಪ್ರಯತ್ನ ಮಾಡಿದ್ರು. ಕೊನೆಗೆ ಪೊಲೀಸರು ಬಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ರು.

ಆದರೆ, ಮಗಳನ್ನ ಕಳೆದುಕೊಂಡ ಅಪ್ಪನ ಕಣ್ಣೀರು ಮಾತ್ರ ನಿರಂತರವಾಗಿತ್ತು.
ಆದರೆ ಪೊಲೀಸರು ಮಗಳು ವಯಸ್ಕಳಾಗಿದ್ದು, ನಾವೇನೂ ಮಾಡುವಂತಿಲ್ಲ. ಹೀಗಾಗಿ ಹೇಳಿಕೆ ಪಡೆದು ಕಳುಹಿಸಿದ್ದೇವೆ ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *