*ಐದು ದಿನದಲ್ಲಿ ಐದು ಕೊಲೆ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಹೈ ಅಲರ್ಟ್*
*ಎಲ್ಲಾ ಪೋಲಿಸ್ ಠಾಣೆಗಳಿಂದ ಜಾಗೃತಿ ಕಾರ್ಯಕ್ರಮ ಆಯೋಜನೆ*
*ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಆದೇಶದಂತೆ ನೈಟ್ ರೌಂಡ್ಸ್*
*ಧಾರವಾಡದ ವಿದ್ಯಾಗಿರಿ, ಪೋಲಿಸ್ ಠಾಣೆ ಉಪನಗರ ಪೋಲಿಸ್ ಠಾಣೆ, ಶಹರ ಪೋಲಿಸ್ ಠಾಣೆಯಿಂದ ನೈಟ್ ರೌಂಡ್ಸ*
*ಎಸಿಪಿ ಪ್ರಶಾಂತ ಸಿದ್ದನಗೌಡ ನೇತೃತ್ವದಲ್ಲಿ ನೈಟ್ ರೌಂಡ್ಸ್*
*ಎಸಿಪಿಗೆ ಸಿಪಿಐ ದಯಾನಂದ ಸೇಗುಣಸಿ, ಸಂಗಮೇಶ ದಿಡಗಿನಾಳ್ ಸಾಥ್*.
*ಯುವಕರಲ್ಲಿ 112 ಬಗ್ಗೆ ಮಾಹಿತಿ ನೀಡುತ್ತಿರುವ ಎಸಿಪಿ ಪ್ರಶಾಂತ ಸಿದ್ದನಗೌಡ*
ಧಾರವಾಡ ಪ್ರಜಾಕಿರಣ.ಕಾಮ್ :
ಸದ್ಯ ಹುಬ್ಬಳ್ಳಿ- ಧಾರವಾಡ
ಅವಳಿ ನಗರದಲ್ಲಿ ದುನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಇದೀಗ ಎಲ್ಲೆಡೆ ಹೈ ಅರ್ಲಟ್ ಆಗಿ, ಹಗಲು ರಾತ್ರಿ ಎನ್ನದೆ ಟೊಂಕ ಕಟ್ಟಿ ನಿಂತು ಕೆಲಸ ಮಾಡುತ್ತಿದ್ದಾರೆ.
ಹೌದು ಕಳೆದ ಐದು ದಿನಗಳಲ್ಲಿ ಧಾರವಾಡ ನಗರ ಒಂದರಲ್ಲಿಯೇ ಐದು ಕೊಲೆಗಳಾದ ಹಿನ್ನೆಲೆಯಲ್ಲಿ
ಎಲ್ಲಾ ಪೋಲಿಸ್ ಠಾಣೆಯ ಪಿಎಸ್ ಐ ಮತ್ತು ಸಿಪಿಐ ಗಳಿಗೆ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಖಡಕ್ ಆದೇಶ ನೀಡಿದ್ದಾರೆ.
ಹೀಗಾಗಿ ಇಂದು ರಾತ್ರಿ ೧೧ ಗಂಟೆಯಿಂದಲೇ ಪೊಲೀಸರು ಎಲ್ಲಡೆ ಗಸ್ತು ಬಿಗಿಗೊಳಿಸಿದ್ದು,
ಎಲ್ಲಾ ಪೋಲಿಸ್ ಠಾಣೆಗಳಿಂದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜೊತೆಗೆ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಆದೇಶದಂತೆ ಎಲ್ಲಾ ಕಡೆಗಳಲ್ಲಿ ನೈಟ್ ರೌಂಡ್ಸ್ ನಡೆಸಲಾಗುತ್ತಿದೆ.
ಧಾರವಾಡದ ವಿದ್ಯಾಗಿರಿ, ಪೋಲಿಸ್ ಠಾಣೆ ಉಪನಗರ ಪೋಲಿಸ್ ಠಾಣೆ, ಶಹರ ಪೋಲಿಸ್ ಠಾಣೆಯಿಂದ ನೈಟ್ ರೌಂಡ್ಸ ನಡೆಸಲಾಗುತ್ತಿದೆ.
ಎಸಿಪಿ ಪ್ರಶಾಂತ ಸಿದ್ದನಗೌಡ ನೇತೃತ್ವದಲ್ಲಿ ನೈಟ್ ರೌಂಡ್ಸ್ ನಡೆಯುತ್ತಿದ್ದು, ಅವರಿಗೆ ಉಪನಗರ ಪೊಲೀಸ್ ಠಾಣೆ ಸಿಪಿಐ ದಯಾನಂದ ಶೆಗುಣಸಿ, ವಿದ್ಯಾಗಿರಿ ಸಿಪಿಐ ಸಂಗಮೇಶ ದಿಡಗಿನಾಳ್ ಸೇರಿದಂತೆ ಮೂರು ಠಾಣೆಗಳ ಪಿಎಸ್ ಐ ಹಾಗೂ ಎ ಎಸ್ ಐ, ಪೊಲೀಸ್ ಸಿಬ್ಬಂದಿ ವರ್ಗದವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಇದರೊಂದಿಗೆ ಯುವಕರಲ್ಲಿ 112 ಬಗ್ಗೆ ಎಸಿಪಿ ಪ್ರಶಾಂತ ಸಿದ್ದನಗೌಡ ಅವರು ಮಾಹಿತಿ ನೀಡುತ್ತಿರುವುದು ಕಂಡು ಬಂತು.