ಧಾರವಾಡ Prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ಡಿಸೆಂಬರ್ 9 ಕ್ಕೆ ಮುಂದೂಡಿದೆ.
ಧಾರವಾಡ ಜಿಲ್ಲೆಯ ಮೂರನೇ ಹೆಚ್ಚುವರಿ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ವಿನಯ ಕುಲಕರ್ಣಿ ಪರ ವಾದ ಮಂಡಿಸಿದ ವಕೀಲ ಬಾಹುಬಲಿ ಧನವಾಡೆ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ದೂರು ಸಲ್ಲಿಕೆ ಆಗಿಲ್ಲ, ಈ ಪ್ರಕರಣದ ಯಾವುದೇ ಆರೋಪಿಗಳ ಜೊತೆಗೆ ನಾಲ್ಕು ತಿಂಗಳ ಮುಂಚೆಯಿಂದ ಸಂಪರ್ಕವಿಲ್ಲ.
ಒಬ್ಬನೇ ಒಬ್ಬ ಆರೋಪಿ ಜೊತೆಗೆ ನಂಟು ಹೊಂದಿಲ್ಲ ಎಂದು ಗಮನ ಸೆಳೆದರು.
ಅಲ್ಲದೆ, ಈ ಕೊಲೆ ಪ್ರಕರಣ ದಲ್ಲಿ ಮಾಜಿ ಸಚುವ ಎಚ್ ಕೆ ಪಾಟೀಲ ಹೆಸರು ಕೇಳಿ ಬಂದಿದೆ.
ಆದರೆ ಸಿಬಿಐ ಈವರೆಗೆ ಅವರ ವಿಚಾರಣೆ ನಡೆಸಿಲ್ಲ. ಸಿಬಿಐ ಈ ನಡೆ ದುರುದ್ದೇಶದಿಂದ ಕೂಡಿದೆ.
ಹೀಗಾಗಿ ಅವರಿಗೆ
ಜಾಮೀನು ಕೊಡಬೇಕು ಎಂದು ಮನವಿ ಮಾಡಿದರು.
ವಿನಯ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಸಿಬಿಐ ಪರ ವಕೀಲರು ವಾದ ಮಂಡಿಸಲು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9 ಕ್ಕೆ ಮುಂದೂಡಿತು.
ಹೀಗಾಗಿ ಮತ್ತೆ ಡಿಸೆಂಬರ್ 9 ರವರೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.