ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ರಾಸಲೀಲೆ ಸಿಡಿ ಪ್ರಕರಣದ ಕಿಂಗ್ ಪಿನ್ ಎನ್ನಲಾದ ಇಬ್ಬರು ಮಾಜಿ ಪತ್ರಕರ್ತರಿಗೆ ಎಸ್ ಐ ಟಿ ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ಡ್ರಿಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನರೇಶ್ ಹಾಗೂ ಶ್ರವಣ್ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್ ವಿಂಗ್ ಗೆ ವಿಚಾರಣೆಗೆ ಆಗಮಿಸಿದರು.
ಮಧ್ಯಾಹ್ನ 1.15 ಗಂಟೆಗೆ ವಿಚಾರಣೆ ಆರಂಭಿಸಿದ ಎಸ್ ಐಟಿ ಅಧಿಕಾರಿಗಳು ಯುವತಿ ಮೊದಲೇ ಪರಿಚಯ ಇದ್ದಳಾ, ಯಾವಾಗ ಭೇಟಿ ನೀಡಿ ಎನೆಂಥ ಮನವಿ ಮಾಡಿದರು.
ನಿಮಗೆ ಸಹಾಯ ಕೇಳಿದಳಾ, ನೀವು ಯಾರಿಗಾದರೂ ಹಣದ ಬೇಡಿಕೆ ಇಟ್ಟರಾ ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದರು.
ಕೆಲಕಾಲ ಶಾಕ್ ಆದ ಅವರು ವಿಚಾರಣೆಗೆ ಬೆಚ್ಚಿಬಿದ್ದರು.ಅವರ ಹೇಳಿಕೆಯಿಂದ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುತ್ತಾ ಎಂಬುದು ಕಾದು ನೋಡಬೇಕು