ರಾಜ್ಯ

ಶಾಸಕ ಅರವಿಂದ ಬೆಲ್ಲದ ದೆಹಲಿ ಭೇಟಿಗೆ ಟಾಂಗ್ ನೀಡಿದ ಸಚಿವ ಸೋಮಣ್ಣ….!

ಬೆಂಗಳೂರು prajakiran.com : ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ದೆಹಲಿ ಭೇಟಿಗೆ ವಸತಿ ಸಚಿವ ಸೋಮಣ್ಣ ಟಾಂಗ್ ನೀಡಿದ್ದಾರೆ.

ಕೆಲವರಿಗೆ ಕೆಲವು ಕಾಯಿಲೆ ಇರ್ತಾವೆ. ಕೆಲವು ಕಾಯಿಲೆಗಳಿಗೆ ಮದ್ದಿಲ್ಲ. ನಾನು ಇನ್ನು ಒಂದನೇ ತರಗತಿಯಲ್ಲಿ ಇದ್ದೇನೆ ಎಂದು ಛೇಡಿಸಿದರು.

ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಲಿ ನನಗೆ ಅದು ಗೊತ್ತಿಲ್ಲ ಎಂದರು‌.
ನನಗೆ ಕೊಡಗಿನ ಉಸ್ತುವಾರಿ ಕೊಟ್ಡಿದ್ದಾರೆ.

ನಾನು ನನ್ನ ಶಕ್ತಿ ಮೀರಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಶ್ರಮಿಸುತ್ತಿದ್ದೇನೆ ಎಂದು ಸಚಿವ ಸೋಮಣ್ಣ ಹೇಳಿದರು.

ಇನ್ನು ಎರಡು ವರ್ಷಗಳ ಕಾಲ ನಾನೇ ಸಿಎಂ  ಎಂದು ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ರಾಜ್ಯದ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆ ಕೂಗು ಮತ್ತೆ ಬಲಗೊಂಡಿದೆ.

ಶಾಸಕ ಬೆಲ್ಲದ ದೆಹಲಿ ಭೇಟಿಗೆ ಭಾರೀ ಮಹತ್ವ ಬಂದಿದೆ. ಜೂನ್ 16ರಂದು ರಾಜ್ಯಕ್ಕೆ ಉಸ್ತುವಾರಿ ಅರುಣಸಿಂಗದ ಭೇಟಿಗೆ ಮುನ್ನವೇ ದೆಹಲಿ ಅಂಗಳಕ್ಕೆ ತೆರಳಿರುವ ಶಾಸಕರ ನಡೆ ಪರ ವಿರೋಧಕ್ಕೆ ಕಾರಣವಾಗಿರುವುದು ಸುಳ್ಳಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *