ರಾಜ್ಯ

ಬಸವರಾಜ್ ಮುತ್ತಗಿ ನಾವು ಒಂದೇ ಕುಟುಂಬದ ಸದಸ್ಯರು ಎಂದ ವಿಜಯ ಕುಲಕರ್ಣಿ

ಸುಪಾರಿ ಸತ್ಯಕ್ಕೆ ದೂರವಾದದ್ದು

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ
ಯೋಗೀಶಗೌಡ ಹತ್ಯೆ ಸಿಬಿಐ ತನಿಖೆಗೆ ಹಾಜರಾಗಿ ಹೊರಬಂದ ಬಳಿಕ ಮಾಧ್ಯಮ ಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.

ಬಸವರಾಜ್ ಮುತ್ತಗಿ ಸುಪಾರಿ ಸತ್ಯಕ್ಕೆ ದೂರವಾಗಿದೆ.
ಮುತ್ತಗಿ ಮತ್ತು ನಾವೆಲ್ಲರೂ ಕುಟುಂಬ ಸದಸ್ಯರಿದ್ದಂತೆ.

ಅದನ್ನು ಯಾರು ಹಬ್ಬಿಸಿದ್ದಾರೆಯೋ ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನಾವೆಲ್ಲ. ಒಂದೇ ತಾಟಿನಲ್ಲಿ ಊಟ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಹಲವರ ವಿಚಾರಣೆ : ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಸೋಮು ನ್ಯಾಮಗೌಡ, ವಿನಯ ಸಂಬಂಧಿ ನಟರಾಜ್ , ಸೋದರ ಮಾವ ಚಂದು ಮಾಮ, ಪೊಲೀಸ್ ಅಧಿಕಾರಿ ವರ್ಗದವರ ಜೊತೆಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ನಿವೃತ್ತ ಡಿವೈಎಸ್ಪಿ ಪುತ್ರ ಕಿರಣ ವೀರನಗೌಡರ ಸೇರಿ ಹಲವರ ವಿಚಾರಣೆ ನಡೆಸಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದರು ಎಂದು ಹೇಳಲಾಗುತ್ತಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *