ಬೆಂಗಳೂರು prajakiran.com : ರಾಜ್ಯದ ರಾಜಧಾನಿಯಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
3-4 ಆಸ್ಪತ್ರೆ ಸುತ್ತಾಡಿದರೂ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ ಎಂಬ ಕಾರಣಕ್ಕೆ 20 ಸಾವಿರ ಕೊಟ್ಟು ವರ್ಕ್ ಇನ್ಸಪೆಕ್ಟರ್ ಒಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಬಿಎಂಪಿಯ ವರ್ಕ್ ಇನ್ಸಪೆಕ್ಟರ್ ಅವರಿಗೆ ಇಂತಹ ದಯನೀಯ ಪರಿಸ್ಥಿತಿ ಬಂದಿದೆ. ಇಂತಹ ಘಟನೆ ಯಾರಿಗೂ ಬರಬಾರದು.
ಬಿಬಿಎಂಪಿ ಸಿಬ್ಬಂದಿಗೆ ಇಂತಹ ಸಂಕಷ್ಟ ಎದುರಾದರೆ ಹೇಗೆ. ಯಾರೊಬ್ಬ ಅಧಿಕಾರಿಗಳು ನಮಗೆ ಕ್ಯಾರೆ ಎನ್ನುತ್ತಿಲ್ಲ ಎಂಬ ಅಳಲು ತೋಡಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಂಗೇರಿಯ ಆಸ್ಪತ್ರೆಗೆ ದಾಖಲಾದ ವರ್ಕ್ ಇನ್ಸಪೆಕ್ಟರ್ ಕಣ್ಣೀರು ಹಾಕಿದ್ದಾರೆ. ನನಗೆ ಪಾಸಿಟಿವ್ ಬಂದ್ರೂ ಡೊಂಟ್ ಕೇರ್ ಮಾಡಲಾಗುತ್ತಿದೆ.
ಅಂಬುಲೆನ್ಸ್ ಸಿಗದಕ್ಕೆ ಬೈಕ್ ಮೇಲೆ ಹಲವು ಆಸ್ಪತ್ರೆಗೆ ಅಲೆದಾಟ ನಡೆಸಿದ್ದೇನೆ ಎಂದು ಗೋಳು ತೋಡಿಕೊಂಡಿದ್ದಾರೆ.
ಅಲ್ಲದೆ, ನನಗೆ ಬಂದ ದುಸ್ಥಿತಿ ಬೇರೆಯವರಿಗೆ ಬಾರದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಸಾಗರ ಆಸ್ಪತ್ರೆಗೆ ಹೋದರೂ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಬಿಬಿಎಂಪಿ ವರ್ಕ್ ಇನ್ಸಪೆಕ್ಟರ್ ಪರಿಸ್ಥಿತಿಯೇ ಹೀಗಿರುವಾಗ ಜನ ಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಬೆಂಗಳೂರಿಗರಿಗೆ ಎದುರಾಗಿದೆ.