ನವದೆಹಲಿ prajakiran.com : ದೇಶದ ಏಳು ರಾಜ್ಯದ ಸಿಎಂಗಳ ಜೊತೆಗೆ ವೀಡಿಯೋ ಕಾನ್ಪರೆನ್ಸ್ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೋನಾ ಕುರಿತು ಸೂಕ್ತ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಅದರಲ್ಲೂ ಮೈಕ್ರೋ ಕಂಟೋನ್ ಮೆಂಟ್ ಮೇಲೆ ನಿಗಾವಹಿಸಿ,ಜನ ಜೀವನಕ್ಕೆ ತೊಂದರೆ ಆಗದಂತೆ ಎಚ್ಚರವಹಿಸುವಂತೆ ನಿರ್ದೇಶನವಹಿಸಿದ್ದಾರೆ.
ಅಲ್ಲದೆ, ಈ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆಯಾಗಿಲ್ಲ. ಲಾಕ್ ಡೌನ್ ಮಾಡುವ ಕುರಿತು ಪ್ರಸ್ತಾಪವಿಲ್ಲ. ಮತ್ತೆ ಮೊಟಕುಗೊಳಿಸುವ ಪ್ರಶ್ನೆ ಸರಕಾರದ ಮುಂದಿಲ್ಲ.
ಹೀಗಾಗಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.