ರಾಜ್ಯ

ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಾಜು ಧೂಳಿ ಕರೋನಾಗೆ ಬಲಿ….!

ಹುಬ್ಬಳ್ಳಿ prajakiran.com : ಹಳಿಯಾಳದ ಬಿಜೆಪಿ ಮುಖಂಡ ಹಾಗೂ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ರಾಜು ಧೂಳಿ ಶನಿವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಸೋಂಕಿನಿಂದ ವಿಧಿವಶರಾದರು.

ಅವರು ಕಳೆದ ಹಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.

ಅವರ ತಾಯಿಗೆ ಕೂಡ ಕರೋನಾ ಸೋಂಕು ತಗುಲಿದ ಪರಿಣಾಮ ಕಳೆದ ಮೂರುನಾಲ್ಕು ದಿನಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು‌.

ತಾಯಿಯವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಆಕ್ಸಿಜನ್ ಧರಿಸಿಯೇ ಬಂದು ಗಮನ ಸೆಳೆದಿದ್ದ ರಾಜು ಧೂಳಿ ಇಂದು ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು.

ಅವರ ಅಗಲಿಕೆ ಬಿಜೆಪಿ ಹಾಗೂ ಹಿಂದು ಮಹಾಸಭಾಕ್ಕೆ ತುಂಬಲಾರದ ನಷ್ಟವಾಗಿದೆ.
ಒಬ್ಬ ಹಿಂದು ಹೋರಾಟಗಾರನ ಕಳೆದುಕೊಂಡ ಹಿಂದು ಸಂಘಟನೆಯಗಳು ಬಡವಾಗಿವೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *