ರಾಜ್ಯ

ಪರೋಕ್ಷವಾಗಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಸಚಿವ ಸಿ.ಪಿ. ಯೋಗಿಶ್ವರ  ಗುಡುಗು

ಮೈಸೂರು prajakiran.com :
ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಷಯ ಮುನ್ನಲೆಗೆ ಬಂದಿದೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ ಮನೆಗೆ ಭೇಟಿ ನೀಡಿ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿಎಂ ಎಂದರೆ ರಾಜ್ಯದ ಜನರ ಆಶೋತ್ತರಗಳಿಗೆ 24 ಗಂಟೆಗಳ ಕಾಲ ಸ್ಪಂದಿಸುವ ಹುದ್ದೆಯಾಗಿದೆ.

ಹೊರತು ವೈಭವವಲ್ಲ ಎಂದು
ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಜೊತೆಗೆ ಬದಲಾವಣೆ ಜಗದ ನಿಯಮ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಸರ್ಕಾರ ಬರಲು ನಾವು ಬಹಳಷ್ಟು ಶ್ರಮಿಸಿದ್ದೇವೆ.

ಸಿಎಂ ಎಂದರೆ ವೈಭವಲ್ಲ, ಬಹಳ ಸಂವೇದನಾಶೀಲರಾಗಿರಬೇಕು. ಜನರ ಸಮಸ್ಯೆ ಪರಿಹರಿಸುವಂತಿರಬೇಕು ಎಂದು ಹೇಳಿದರು.

ಆನೆಗೆ ಅಂಬಾರಿ ಹೊರಿಸುವಾಗ ಭಾರ ಹೋರಲು ಅದು ಸಾಧ್ಯವೇ? ಯಾವ ಆನೆ ಸೂಕ್ತ ಎಂಬುದು ಎಷ್ಟು ಮುಖ್ಯವೋ ಜೊತೆಗೆ ಬದಲಾವಣೆ ಎಂಬುದು ಜಗದ ನಿಯಮ.

ಅರ್ಜುನ, ಬಲರಾಮ್, ಅಭಿಮನ್ಯು ಹೀಗೆ ಬದಲಾಗುತ್ತವೆ. ಹಾಗಂತ ಮರಿಯಾನೆ ಆನೆಯೂ ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೂ ಕೊಡಲಾಗದು ಎಂದು ಪರೋಕ್ಷವಾಗಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಸಚಿವ ಸಿ.ಪಿ. ಯೋಗಿಶ್ವರ  ಗುಡುಗಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *