ಬೆಳಗಾವಿ prajakiran.com : ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ನಗರದಲ್ಲಿ ನಡೆದಿದೆ.
ಬಾಳೆಹಣ್ಣು ಮಾಡುತ್ತಿರುವ ಮಹಿಳೆ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಯಾಸ್ಮಿನ್ ಅಲ್ಲಾಹುದಿನ್ ತಹಸೀಲ್ದಾರ್ (25) ಎಂಬಾಕೆಯ ಮೇಲೆ ಆಸಿಡ್ ದಾಳಿ ಮಾಡಲಾಗಿದೆ.
ತಕ್ಷಣವೇ ಮಹಿಳೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ರಾಯಬಾಗ್ ಸ್ಟೇಶನ್ ನಿವಾಸಿಯಾಗಿದ್ದ ಯಾಸ್ಮಿನ್ ದಿನಾಲೂ ರಾಯಬಾಗನಲ್ಲಿ ಬಾಳೆಹಣ್ಣು ಮಾರಿ ತನ್ನ ಜೀವನವನ್ನು ಸಾಗಿಸುತ್ತಿದ್ದಳು.
ಆಸಿಡ್ ದಾಳಿಯಿಂದ ಆಕೆಯ ಇಡೀ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ. ಈ ಕುರಿತು ರಾಯಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.