ರಾಜ್ಯ

ಬಸವರಾಜ ಮುತ್ತಗಿ ಹತ್ಯೆಗೂ ಸಂಚು ಬಯಲು……!

ಧಾರವಾಡ prajakiran.com :
ಧಾರವಾಡ ಜಿಲ್ಲೆಯ ಜಿಪಂ ಸದಸ್ಯ
ಯೋಗೀಶ್‌ಗೌಡ ಹತ್ಯೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಹತ್ಯೆಗೂ ಸಂಚು ರೂಪಿಸಿದ್ದ ಮಾಹಿತಿ ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ.

ಚಂದೂ ಮಾಮ ಅಲಿಯಾಸ್ ಚಂದ್ರಶೇಖರ ಇಂಡಿ ವಶಕ್ಕೆ ಪಡೆದಿದ್ದ ಸಿಬಿಐ ಎದುರು ಈ ರೋಚಕ ಸತ್ಯ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಪ್ರಕರಣದ ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆ ಈ ಸಂಚು ರೂಪಿಸಲಾಗಿತ್ತು. ವಿಜಯಪುರ ಜಿಲ್ಲೆಯ ಹುಡುಗರು ಒಮ್ಮೆ ಬಂದು ಹೋಗಿದ್ದರು.

ಇನ್ನೊಮ್ಮೆ ಧಾರವಾಡ ಹಳಿಯಾಳ ರಸ್ತೆ ಬಳಿ ಬೆನ್ಬಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ,
ಸಿಬಿಐ ವಿಚಾರಣೆ ಮುಗಿಸಿ ಹೊರಬಂದ ಬಸವರಾಜ ಮುತ್ತಗಿ
ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ವಿಚಾರ
ಸುದ್ದಿ ಸುಳ್ಳಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ.

ನಮ್ಮ
ಭಾವನೆಗಳ ಜೊತೆ ಯಾರೊಬ್ಬರೂ ಆಟವಾಡಬಾರದು.
ನಿಮ್ಮ ಜೊತೆ ನಾವು ಭಾವನೆಗಳೊಂದಿಗೆ ಬದುಕಿದ್ದೆವು.

ಆ ಭಾವನೆಗಳಿಗೆ ದ್ರೋಹ ಮಾಡಬೇಡಿ‌.
ನಂಬಿಕೆಗೆ ದ್ರೋಹ ಮಾಡಬೇಡಿ. ಸದ್ಯ ಪ್ರಕರಣ
ಇನ್ನೂ ವಿಚಾರಣೆ ನಡೆಯುತ್ತಿದೆ.

ಅದರಲ್ಲಿ ಇನ್ನೂ ಅನೇಕ ಅಂಶಗಳಿವೆ
ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ.
ಮತ್ತೆ ವಿಚಾರಣೆಗೆ ಮರಳಿ ಬರುತ್ತೇನೆ ಎಂದು
ಬಸವರಾಜ ಮುತ್ತಗಿ ಹೇಳಿಕೆ ನೀಡಿದರು.

ಈ ಹಿಂದೆ ಪ್ರಕರಣಕ್ಕೆ ಕಾನೂನು ನೆರವು ನೀಡಿ, ಅವರ ಕುಟುಂಬದ ಪರವಾಗಿ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ, ಯೋಗೀಶಗೌಡ ಗೌಡರ ಸಹೋದರ ಗುರುನಾಥ ಗೌಡರ ಹತ್ಯೆಗೂ ಸಂಚು ರೂಪಿಸಿದ ಮಾಹಿತಿ ಹೊರಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *