ಬಳ್ಳಾರಿ prajakiran.com : ಮಾಜಿ ಸಚಿವ ಹಾಗೂ ಹೂವಿನ ಹಡಗಲಿಯ ಹಾಲಿ ಕಾಂಗ್ರಸ್ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ಸಹೋದರ ಪಿ.ಟಿ.ಶಿವಾಜಿ ನಾಯ್ಕ್ ಸೇರಿ 6 ಜನರನ್ನು ಪೊಲೀಸರು
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಬಂಧಿಸಿದ್ದಾರೆ.
ನಿವೇಶನ ವಿಚಾರವಾಗಿ ಗೂಂಡಾಗಿರಿ ನಡೆಸಿದಲ್ಲದೆ,ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಶಿವಾಜಿ ನಾಯ್ಕ್, ಪತ್ನಿ ಕುಮಾರಿ ಭಾಯಿ, ಮಗ ರಾಹುಲ್, ಜಗದೀಶ್, ಪತ್ನಿ ಶ್ರೀದೇವಿ ಹಾಗೂ ಸಹೋದರ ಶಿವಕುಮಾರ್ ನನ್ನು ಬಂಧಿಸಿದ್ದಾರೆ.
ಇವರೆಲ್ಲ ನಿವೇಶನ ವಿಚಾರವಾಗಿ ಗೂಂಡಾಗಿರಿ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶರಣ ನಾಯ್ಕ್ ಹಾಗೂ ಕುಟುಂಬಸ್ಥರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಶಿವಾಜಿ ನಾಯ್ಕ್ ಬಂಧನವಾಗಿತ್ತು.
ಜಾಮೀನು ಪಡೆದು ನಿನ್ನೆಯಷ್ಟೇ ಬಿಡುಗಡೆಯಾಗಿ ಬಂದಿದ್ದ ಶಿವಾಜಿ ನಾಯ್ಕ್ ಮತ್ತೆ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಎಂದು ಹಲ್ಲೆ ನಡೆಸಿದ್ದರು.
ಗಲಾಟೆ ಹಾಗೂ ಮಾರಾಮಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಲ್ಲದೆ, ಹಲ್ಲೆಗೊಳಗಾದ ಶರಣ್ ನಾಯ್ಕಗ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಇದೀಗ ಪ್ರಕರಣ ಸಂಬಂಧ ಶಿವಾಜಿ ನಾಯ್ಕ್ ವಿರುದ್ಧ ಪ್ರತಿದೂರು ದಾಖಲು ಆಗಿದ್ದು ಅವರ ಕಡೆಯವರನ್ನು ಕೂಡ ಬಂಧಿಸಲಾಗಿದೆ.