ರಾಜ್ಯ

ಧಾರವಾಡ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿಗೆ ಮರೆವಾಡ ಗ್ರಾಮಸ್ಥರ ಶಾಕ್

*ಧಾರವಾಡ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿಗೆ ಮರೆವಾಡ ಗ್ರಾಮಸ್ಥರ ಶಾಕ್*

*ಆಮ್ಯಾಲ್ ಬೇಕಿದ್ರ ಊರಿಗೆ ಬರಿ ಎಂದು ಬಿಸಿ ತಾಕಿಸಿದ ಜನತೆ*

*ಗ್ರಾಮಸ್ಥರ ನಡೆ ಕಂಡು ಕಕ್ಕಾಬಿಕ್ಕಿಯಾದ ಶಾಸಕರ ಬೆಂಬಲಿಗರು*

*ದಾರಿ ಕಾಣದೆ ಕಾರ್ ನಲ್ಲಿ ವಾಪಾಸ್ ಆದ ಶಾಸಕರು*

ಧಾರವಾಡ ಪ್ರಜಾಕಿರಣ.ಕಾಮ್ :
ಧಾರವಾಡ ವಿಧಾನ ಸಭಾ ಕ್ಷೇತ್ರ 71ರ ಚುನಾವಣೆ ಕಾವು ದಿನೇ ದಿನೇ ಒಂದು ಹೊಸ ತಿರುವು ಪಡೆಯುತ್ತಿದೆ.

ನಿನ್ನೆ ಶನಿವಾರ ಧಾರವಾಡ ತಾಲೂಕಿನ
ಮರೆವಾಡ ಗ್ರಾಮದಲ್ಲಿ
ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿತ್ತು.

ಅದರ ಪ್ರಥಮ ಬಹುಮಾನದ ಪ್ರಾಯೋಜಕತ್ವ ಹಾಲಿಶಾಸಕರೇ ವಹಿಸಿಕೊಂಡಿದ್ದರು. ಅದನ್ನು ವಿತರಿಸಲು ಅವರು ತಮ್ಮ ಬೆಂಬಲಿಗರ ಸಮೇತ ಆಗಮಿಸಿದ್ದರು.

ಈ ವೇಳೆ ಮರೆವಾಡ ಗ್ರಾಮದ ಕೆಲ ಹಿರಿಯರು
ಐದು ವರ್ಷಗಳ ಕಾಲ ಏನ್ ಕೆಲಸ ಮಾಡ್ಯಾರ ಮೊದಲ ಹೇಳಿರಿ ಎಂದು ಬೆಂಬಲಿಗರಿಗೆ ಪ್ರಶ್ನಿಸಿದರು.

ಇದರಿಂದಾಗಿ ಶಾಸಕರು ಹಾಗೂ ಅವರ ಬೆಂಬಲಿಗರು ಕೆಲಕಾಲ ದಿಕ್ಕು ತೋಚದೆ ಕಂಗಾಲಾದರು.

ಅಲ್ಲದೆ,
ಹಾಲಿ ಶಾಸಕ ಅಮೃತ ದೇಸಾಯಿ ಮರಳಿ ಹೋದ ಪ್ರಸಂಗ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ಧಾರವಾಡ ತಾಲೂಕಿನ ಅಧ್ಯಕ್ಷ
ರುದ್ರಪ್ಪ ಅರಿವಾಳ ಹಾಗೂ
ಶಂಕರ ಗೌಡ ಪಾಟೀಲ ಸೇರಿದಂತೆ ಹಲವು ಶಾಸಕರ ಬೆಂಬಲಿಗರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

ಆದರೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ತಿಳಿದುಬಂದಿದೆ.

ಈ ವೇಳೆ ಶಾಸಕರ ಹಲವು ಸಂಬಂಧಿಕರು, ಬಿಜೆಪಿ ಮುಖಂಡರು ಅಮ್ಮಿನಬಾವಿ ಹಾಗೂ ಮರೆವಾಡ ಗ್ರಾಮದ ಹಿರಿಯರ ಮೇಲೆ ಪ್ರಭಾವ ಬೀರುವ ಕೆಲಸ ಮುಂದುವರೆಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *