ಹುಬ್ಬಳ್ಳಿ prajakiran.com : ಡಬಲ್ ಮರ್ಡರ್ ಆರೋಪಿಯೊಬ್ಬ ಜೈಲು ಆವರಣದಲ್ಲಿ ಸ್ವಚ್ಚತಾ ಕಾರ್ಯದ ನೆಪದಲ್ಲಿ ಪರಾರಿಯಾಗಿರುವ ಘಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಪ ಕೇಂದ್ರ ಕಾರಾಗೃಹದಲ್ಲಿ ಕಳೆದ ಆರೂವರೆ ವರ್ಷ ದಿಂದ ವಿಚಾರಣಾಧೀನ ಖೈದಿಯಾಗಿರುವ ಹುಬ್ಬಳ್ಳಿಯ ಆನಂದನಗರದ ವಿಜ್ಯಾ ಅಲಿಯಾಸ್ ವಿಜಯಯಾನಂದ ರೇಣುಕಾಪ್ರಸಾದ ನರೇಗಲ್ ಎಂಬಾತನೇ ಪರಾರಿಯಾಗಿರುವ ಖೈದಿಯಾಗಿದ್ದಾನೆ.
ಇತನನ್ನು ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಈತನ ಪತ್ತೆ ಹಚ್ಚಲು ನಿನ್ನೆ ಹಲವು ಕಡೆ ಪೊಲೀಸರು ಹುಡುಕಾಡಿದ್ದಾರೆ.ಆದರೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ.
ಈ ಕುರಿತು ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.