ರಾಜ್ಯ

ಹುಬ್ಬಳ್ಳಿ ಜೈಲು ಆವರಣದ ಸ್ವಚ್ಚತಾ ಕಾರ್ಯದ ನೆಪದಲ್ಲಿ ಡಬಲ್ ಮರ್ಡರ್ ಆರೋಪಿ ಪರಾರಿ…..!

ಹುಬ್ಬಳ್ಳಿ prajakiran.com : ಡಬಲ್ ಮರ್ಡರ್ ಆರೋಪಿಯೊಬ್ಬ ಜೈಲು ಆವರಣದಲ್ಲಿ ಸ್ವಚ್ಚತಾ ಕಾರ್ಯದ ನೆಪದಲ್ಲಿ ಪರಾರಿಯಾಗಿರುವ ಘಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಉಪ ಕೇಂದ್ರ ಕಾರಾಗೃಹದಲ್ಲಿ ಕಳೆದ ಆರೂವರೆ ವರ್ಷ ದಿಂದ ವಿಚಾರಣಾಧೀನ ಖೈದಿಯಾಗಿರುವ ಹುಬ್ಬಳ್ಳಿಯ ಆನಂದನಗರದ ವಿಜ್ಯಾ ಅಲಿಯಾಸ್ ವಿಜಯಯಾನಂದ ರೇಣುಕಾಪ್ರಸಾದ ನರೇಗಲ್ ಎಂಬಾತನೇ ಪರಾರಿಯಾಗಿರುವ ಖೈದಿಯಾಗಿದ್ದಾನೆ.

ಇತನನ್ನು ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಈತನ ಪತ್ತೆ ಹಚ್ಚಲು ನಿನ್ನೆ ಹಲವು ಕಡೆ ಪೊಲೀಸರು ಹುಡುಕಾಡಿದ್ದಾರೆ.ಆದರೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ.

ಈ ಕುರಿತು ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *