ರಾಜ್ಯ

ಮಾಜಿ ಸಚಿವ ಸಂತೋಷ ಲಾಡ್ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ….!

ಹುಬ್ಬಳ್ಳಿ prajakiran.com :
ಕಲಘಟಗಿ‌ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಉಭಯ ‌ನಾಯಕರ ಮಧ್ಯೆ ಫೈಟ್ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂತೋಷ ಲಾಡ್ ಪರ ಬ್ಯಾಟ್ ಬೀಸಿದ್ದಾರೆ.

ನಿನ್ನೆ ಕಲಘಟಗಿಯಲ್ಲಿ ನಡೆದ ಸಮಾರಂಭದಲ್ಲಿ ಲಾಡ್ ಗೆಲ್ಲಿಸಬೇಕು.

ಲಾಡ್ ಕೇವಲ ಶಾಸಕರಲ್ಲ ಅವರೊಬ್ಬ ನಾಯಕ. ಯಾವುದೇ ಜಾತಿ- ಧರ್ಮ ನೋಡದೆ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಹೇಳಿದರು..

ಸಂತೋಷ ಲಾಡ್ ಕಲಘಟಗಿ‌ ಕ್ಷೇತ್ರದಲ್ಲಿ ಉಚಿತವಾಗಿ 7 ಸಾವಿರ ಕೊಳವೆ ಬಾಗಿ ಕೊರೆಸಿದ್ದಾರೆ.

60 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದ್ದಾರೆ. ಯಾರು ಮಾಡದ‌ ಕೆಲಸ ಲಾಡ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹಾಡಿ ಹೊಗಳಿದರು.

ಮಾಜಿ ಸಚಿವ ಸಂತೋಷ ಲಾಡ್ ಹಾಗೂ ನಾಗರಾಜ್ ಛಬ್ಬಿ ಮಧ್ಯೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ.

ಸಂತೋಷ ಲಾಡ್ ಗೆ ಸಿದ್ದರಾಮಯ್ಯ ಬೆಂಬಲ ಅನೆಬಲ ತಂದಂತಾಗಿದೆ.

ಈ ಹಿಂದೆ ಕಲಘಟಗಿ‌ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಸಂತೋಷ ಲಾಡ್.
ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಸೊಲುಂಡ ಬಳಿಕ, ಕ್ಷೇತ್ರದಲ್ಲಿ ಹೊಸ ಆಕಾಂಕ್ಷಿ ನಾಗರಾಜ್ ಛಬ್ಬಿ  ಹುಟ್ಟಿಕೊಂಡಿದ್ದರು.

ಕಲಘಟಗಿ‌ ಕ್ಷೇತ್ರದ ಉಭಯ ನಾಯಕರು ಟಿಕೆಟ್‌ ನಮಗೆ ಪಕ್ಕಾ ಅಂತ ಓಡಾಟ ಮಾಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಭಾರೀ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *