ಧಾರವಾಡ prajakiran.com :
ಮಾಜಿ ಸಚಿವ ಸಂತೋಷ ಲಾಡ್ ಅವರು ಭಾನುವಾರ
ವಿನಯ ಕುಲಕರ್ಣಿ ಅವರಬಾರಾಕೋಟ್ರಿ ಮನೆಗೆ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಿನಯ ಕುಲಕರ್ಣಿ ಬಂಧನ ವಿಚಾರ
ದೇಶದಲ್ಲಿ ಇದು ಹೊಸದಲ್ಲ.
ಕಳೆದ ಆರು ವರ್ಷದಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ಆಪಾದಿಸಿದರು.
ದೇಶದಲ್ಲಿ ಕೇಂದ್ರ ಸರಕಾರ ಏನು ಮಾಡುತ್ತಿದೆ. ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ
ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ವಿನಯ ನನ್ನ ಗೆಳೆಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ
ಅವರೊಂದಿಗೆ ನಾವಿದ್ದೇವೆ
ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ವಿನಯ ಕುಟುಂಬಸ್ಥರನ್ನು ಭೇಟಿಯಾದೆ. ಪತ್ನಿ, ಮಕ್ಕಳು ಭಾವುಕರಾಗಿದ್ದಾರೆ.
ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.
ಸಮಾಧಾನ ಹೇಳಿ ಬಂದಿದ್ದೇನೆ
ನಾವು ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ವಿವರಿಸಿದರು.
ವಿನಯ ಬಂಧನ ರಾಜಕೀಯ ಪ್ರಕರಣವೂ ಹೌದು
ಆದರೆ ವ್ಯಕ್ತಿಗತವಾಗಿ ಯಾರ ಮೇಲೂ ಆರೋಪ ಮಾಡೋದಿಲ್ಲ
ಇವು ವಿನಯ ಅವರಿಗೆ ಇದು ಕೆಟ್ಟ ದಿನಗಳು ಎಂದರು.
ಕೇಂದ್ರ ಸರಕಾರ ಎಲ್ಲ ಇಲಾಖೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ.
ಹಥ್ರಾಸ್ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸಂತ್ರಸ್ತೆ ಮನೆಯವರನ್ನು ಭೇಟಿ ಮಾಡಲು ಬಿಡಲಿಲ್ಲ.
ದೇಶದಲ್ಲಿ ಇದೀಗ ಕೆಟ್ಟ ದಿನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.