ಧಾರವಾಡ prajakiran.com : ಆಕ್ಸಿಜನ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಧಾರವಾಡಕ್ಕೆ ಆಗಮಿಸುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಅಳ್ನಾವರ ರಸ್ತೆಯಲ್ಲಿ ರಾಡಿಯ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ನಡೆದಿದೆ.
ಗೋವಾದಿಂದ ಧಾರವಾಡಕ್ಕೆ ಆಗಮಿಸುತ್ತಿರುವಾಗ ಈ ಘಟನೆ ಜರುಗಿದ್ದು ಈಗಾಗಲೇ ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲಾಡಳಿತದಿಂದ ಈ ಆಕ್ಸಿಜನ್ ಪೂರೈಸಲಾಗುತ್ತಿದೆ. ಟ್ಯಾಂಕರ್ ವಾಹನ ದೊಡ್ಡ ಅಪಘಾತದಿಂದ ಪಾರಾಗಿದೆ.
ಇನ್ನೂ ಸ್ಥಳಿಯರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಲುಕಿಕೊಂಡ ಆಕ್ಸಿಜನ್ ವಾಹನವನ್ನು ಮಧ್ಯಾಹ್ನ ವೇಳೆ ಕ್ರೇನ್ ಮೂಲಕ ತೆಗೆದಿದ್ದಾರೆ.