ರಾಜ್ಯ

ಧಾರವಾಡ-ಗೋವಾ ರಸ್ತೆಯಲ್ಲಿ ರಾತ್ತಿ 11ಕ್ಕೆ ಒಂದು ಗಂಟೆಗಳ ಕಾಲ ದಿಢೀರ್‌ ಪ್ರತಿಭಟನೆ : ಆಂಜನೇಯ ನಗರಕ್ಕೆ 11 ದಿನಗಳಿಂದ ಕುಡಿಯುವ ನೀರಿಲ್ಲ……!?

ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿಯ ಕೆಲಗೇರಿ ಸಮೀಪದ ಆಂಜನೇಯ ನಗರಕ್ಕೆ ಕಳೆದ 11 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ನಿನ್ನೆ ರಾತ್ರಿ ನೂರಾರು ಜನರು ಏಕಾಎಕಿ ರೊಚ್ಚಿಗೆದ್ದು ಖಾಲಿ ಕೊಡಗಳ ಸಮೇತ ಧಾರವಾಡ ಗೋವಾ ರಸ್ತೆಯಲ್ಲಿ ಒಂದು ಗಂಟೆಗಳ ಕಾಲ ದಿಢೀರ್‌ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡಿದರೂ ಸಂಭಂದಿಸಿದ ಮಹಾನಗರ ಪಾಲಿಕೆ ಆಗಲಿ ಜನಪ್ರತಿನಿಧಿಗಳಾಗಲಿ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ರೊಚ್ಚಿಗೆದ್ದ ಜನತೆ ಘೋಷಣೆ ಕೂಗಿ ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ನಡೆಸಿ, ನಾಮಕಾವಾಸ್ತೆ ಎಂಬಂತೆ ಕೆಲ‌ಕಾಲ‌ ನೀರು ಬಿಡಿಸಿ ಸಮಾಧಾನ ಪಡಿಸಿದರು. ಅಲ್ಲದೆ, ನಾಳೆಯಿಂದಲೇ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಅಗತ್ಯ ಕ್ರಮ ಜರುಗಿಸಲು ಸಂಬಂಧಿಸಿದ ಜನರ ಗಮನಕ್ಕೆ ತಂದು ಎಂದು ಮನವರಿಕೆ ಮಾಡಿದಿದ್ದರೆ ಮತ್ತೆ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜನತೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆಲಗೇರಿ ಕೇಸರಿ ಗೆಳಯರ ಬಳಗದ ಕಾರ್ತಿಕ ಕೆಲಗೇರಿ, ಸುನೀಲ್ ಮಳಗಿ, ನಿಂಗಪ್ಪ ಹುಲಿಗೆಪ್ಪನವರ, ವಿಶಾಲ್ ಪಂಚನವರ, ಮಂಜು ಕೆಲಗೇರಿ,
ಮಹಾಂತೇಶ ಶಿವಕ್ಕನವರ,
ಮಲ್ಲಪ್ಪ ಮಡಿವಾಳರ ಸೇರಿದಂತೆ ನೂರಾರು ಮಹಿಳೆಯರು ಖಾಲಿಕೊಡಗಳ ಸಮೇತ ರಸ್ತೆಗೆ ಬಂದು ಹಿಡಿಶಾಪ ಹಾಕಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *