ಧಾರವಾಡ prajakiran.com : ತೀವ್ರ ಕುತೂಹಲ ಕೆರಳಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ ಮತ್ತು ಉಪ ಮೇಯರ ಆಯ್ಕೆ ನಾಳೆ ಮೇ. 30 ರಂದು ಶನಿವಾರ ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಸಭಾಭವನದಲ್ಲಿ ಜರುಗಲಿದೆ ಎಂದು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ. ತಿಳಿಸಿದರು.
ಅವರು ಧಾರವಾಡ ಪಾಲಿಕೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಾಲಿಕೆಯ ೨೮ ಸದಸ್ಯರು ಮತ್ತು ೭ ಚುನಾಯಿತ ಪ್ರತಿನಿಧಿಗಳು ಸೇರಿ ನೂತನ ಮೇಯರ ಮತ್ತು ಉಪ ಮೇಯರ ಆಯ್ಕೆ ಮಾಡಲಿದ್ದಾರೆ.
ಸದಸ್ಯರ ಸಂಖ್ಯಾಬಲದ ಪ್ರಕಾರ ಮ್ಯಾಜಿಕ್ ಸಂಖ್ಯೆ ೪೫ ಇದೆ. ಆದರೆ, ನಾಳಿನ ಸಭೆಯಲ್ಲಿ ಭಾಗವಹಿಸುವರ ಸಂಖ್ಯೆ ಆಧಾರದಲ್ಲಿ ಬಹಮತದ ಸಂಖ್ಯೆ ನಿರ್ಧರಿತವಾಗಲಿದೆ ಎಂದರು.
ಬೆಳಗಾವಿಯ ಪ್ರಾದೇಶಿಕ ಆಯುಕ್ತ ಆಧಿತ್ಯ ಆಮ್ಲಾನ್ ಬಿಸ್ವಾಸ್ ಚುನಾವಣಾಧಿಕಾರಿಗಳಾಗಿದ್ದು. ನಾಳೆ ಅವಳಿನಗರದ ಪ್ರಥಮ ಪ್ರಜೆ ಯಾರಾಗುವರು ಎಂಬುದು ಗೊತ್ತಾಗಲಿದೆ ಎಂದರು.
ಈಗಾಗಲೇ ಬಿಜೆಪಿ ಪಕ್ಷದ ಸದಸ್ಯರು ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ತೀವ್ರ ಸ್ವರೂಪದ ಪೈಪೋಟಿ ನಡೆಸುವ ಮೂಲಕ ವಿಜಯ ಮಾಲೆ ಧರಿಸಲು ಹರಸಾಹಸ ನಡೆಸತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ನಡುವೆ ಮೇಯರ್ ಗದ್ದುಗೆ ಗುದ್ದಾಟ ನಡೆದಿದ್ದು, ಈ ಬಾರಿಯಾದರೂ ಧಾರವಾಡ ಪಾಲಾಗುತ್ತಾ ಇಲ್ಲವೇ ಕಾದು ನೋಡಬೇಕು