ನವಲಗುಂದ prajakiran. com :
ನವಲಗುಂದ ತಾಲೂಕಿನ ಯಮನೂರ ಆರೆಕುರಹಟ್ಟಿ ನಡುವೆ ಟ್ಯಾಂಕರ್ ಹಾಗೂ ಟಾಟಾ ಎಸ್ ನಡುವೆ ಶುಕ್ರವಾರ ಬೆಳ್ಳಂಬೆಳ್ಗಗೆ, ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದರೆ ಗಾಯಗೊಂಡ ಇನ್ನೂ ರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಟ್ಯಾಂಕರ್ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹಾಗೂ ಟಾಟಾ ಏಸ್ ವಾಹನ ನರಗುಂದದಿಂದ ಹುಬ್ಬಳ್ಳಿ ಕಡೆ ಬರುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ.
ಮೃತ ದುರ್ದೈವಿಯನ್ನು ಶಿವಾನಂದ ಸಕ್ರಪ್ಪ ರಾಯನಾಯ್ಕರ ಎನ್ನಲಾಗುತ್ತಿದ್ದು,
ಗಾಯಗೊಂಡ ರಮೇಶ ಯಲ್ಲಪ್ಪ ಕಂಡಿಯವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.