ಅಪರಾಧ

ಭೀಮಾತೀರದ ಹಂತಕ ಬಾಗಪ್ಪನ ತಲ್ವಾರ್ ವಿಡಿಯೋ ವೈರಲ್  

ವಿಜಯಪುರ prajakiran.com : ಭೀಮಾತೀರದ ಹಂತಕ ಬಾಗಪ್ಪ ಹರಿಜನ ತಮ್ಮ ಮನೆ ದೇವರ ಪೂಜಾ ಕಾರ್ಯಕ್ರಮದಲ್ಲಿ ತಲ್ವಾರನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡು ಕತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ‌.

ಭೀಮಾತೀರದ ಹಂತಕ ಬಾಗಪ್ಪ‌ ಹರಿಜನ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲೂಕಿನ‌ ಬಬಲಾದ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ‌ ನಡೆದ ಪೂಜಾ ಕಾರ್ಯಕ್ರಮ ಬಳಿಕ‌ ತಲ್ವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆದಿಂಡನ್ನು ಕೊಚ್ಚಿದ ವೀಡಿಯೋ ಇದಾಗಿದೆ.

ಇನ್ನು ಬಾಗಪ್ಪ ಮಕ್ಮಲ್ ಟೋಪಿ, ಬಿಳಿ‌ ಧೋತಿ, ಬಿಳಿ ಶಲ್ಯ ಧರಿಸಿ ವಿಶೇಷ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದಾನೆ.

ಈತ ಇತ್ತೀಚೆಗೆಷ್ಟೇ ವಿಜಯಪುರದ ಇಂಡಿ‌‌ ಪಟ್ಟಣದ ಚಿನ್ನದ ವ್ಯಾಪಾರಿ‌ ನಾಮದೇವ ಡಾಂಗೆಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಜೈಲಿನಿಂದ ಜಾಮೀನು‌ ಪಡೆದು ಹೊರ ಬಂದಿದ್ದ.

ಭೀಮಾತೀರದ ಹಂತಕ ಬಾಗಪ್ಪ ಹರಿಜನ ದೇವರ ಹರಕೆ ನೆಪದಲ್ಲಿ ತಲ್ವಾರ್ ನೊಂದಿಗೆ ಕಾಣಿಸಿಕೊಂಡಿರುವುದು ಸಾರ್ವಜನಿಕರಿಗೆ ಹಾಗೂ ಅದರಲ್ಲೂ ವಿಶೇಷವಾಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವುದು ಸುಳ್ಳಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *