ಬೆಳಗಾವಿ prajakiran.com : ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ನೆಹರು ನಗರದ ನಿವಾಸಿಯಾಗಿರುವ ಮೆಹಬೂಬ್ ಅಲಿಖಾನ ಪರಾರಿಯಾಗಿದ್ದಾನೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಗಾಳಿ ಮತ್ತು ಬೆಳಗಾವಿ ಉಪವಿಭಾಗದ ಅರಣ್ಯಾಧಿಕಾರಿಗಳ ತಂಡ ಈ ದಾಳಿ ನಡೆಸಿದೆ.
ದಾಳಿ ವೇಳೆ ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಎರಡು ಚಾಕು, 2 ಟಾರ್ಚ್, 2 ವಾಕಿ ಟಾಕಿ, 26 ಜೀವಂತ ಬುಲೆಟ್ ಸೇರಿದಂತೆ ವನ್ಯಜೀವಿ ಭೇಟಿಗೆ ಬಳಸುವ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.