ಧಾರವಾಡ ಪ್ರಜಾಕಿರಣ.ಕಾಮ್ : ಹಣಕ್ಕಾಗಿ ಅಪಹರಣ ಮಾಡಿ ಚಿತ್ರ ಹಿಂಸೆ ನೀಡಿದ್ದಾರೆನ್ನುವ ಪ್ರಕರಣ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಜಯ ಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ತುಕಾರಾಮ್ ಮೋಹಿತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಣಕ್ಕಾಗಿ ಅಪಹರಣ ಮಾಡಿ ಚಿತ್ರ ಹಿಂಸೆ ನೀಡಿದ್ದು ಹೀಗೆ ಎಂದು ತಮ್ಮ ಮೈ ಮೇಲೆ ಆಗಿರುವ ಗಾಯಗಳು ತೋರಿಸಿದ್ದಾರೆ.
ಕೆಐಎಡಿಬಿ ಹಗರಣವೊಂದರಲ್ಲಿ ಜೈಲು ಪಾಲಾಗಿದ್ದ ತುಕಾರಾಮ ಮೋಹಿತೆ ಎಂಬುವವರನ್ನೇ ಅಪಹರಣ ಮಾಡಿಲಾಗಿತ್ತೆಂದು ಅವರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಅಳಗವಾಡಿ ರಸ್ತೆಯಲ್ಲಿ ತುಕಾರಾಮ ಮೋಹಿತೆ ಕಾರಲ್ಲಿ ಬಿಟ್ಟು ಹೋಗಿದ್ದು, ಪ್ರಕರಣ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿದೆ.
ಚಿಕ್ಕಮಲ್ಲಿಗವಾಡ ಗ್ರಾಮದ ಜಗ್ಗು ಹಾಗೂ ಬೋಗುರು ಗ್ರಾಮದ ಕಲ್ಲಯ್ಯ ಪೂಜಾರ ಎಂಬುವರೆ ಧಾರವಾಡ ಎಸ್ ಡಿ ಎಂ ಆಸ್ಪತ್ರೆಯ ಬಳಿ ನಿಂತಾಗ ತನ್ನದೇ ಕಾರಿನಲ್ಲಿ ಗುಂಪು ಕಟ್ಟಿಕೊಂಡು ಬಂದು ಬಲವಂತವಾಗಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಕರಣ ತನಿಖೆ ಮಾಡಿದ ನಂತರ ಸತ್ಯಾಂಶ ಹೊರಬರಲಿದೆ