ಧಾರವಾಡ prajakiran.com : ಕಟಿಂಗ್ ಅಂಗಡಿ ಹಾಗೂ ಕಿರಾಣಿ ಅಂಗಡಿಗೆ ಕನ್ನ ಹಾಕಿದ ಘಟನೆ ಧಾರವಾಡದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್ ಟ್ರಾವೆಲ್ ಇನ್ ಹಾಗೂ ರೆಡ್ ಪೋರ್ಟ್ ಹತ್ತಿರದ ಅಂಗಡಿಗಳಿಗೆ ಖದೀಮರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಕಟಿಂಗ್ ಶಾಪ್ ನಲ್ಲಿದ್ದ ಕತ್ರಿ, ಕಟಿಂಗ್ ಮಶೀನ್ ಗಳನ್ನು ಹೊತ್ತು ಒಯ್ಯದಿದ್ದಾರೆ.
ಅಲ್ಲದೆ ಪಕ್ಕದಲ್ಲಿ ಇದ್ದ ಕಿರಾಣಿ ಅಂಗಡಿಯಲ್ಲಿನ ಅಕ್ಕಿ, ಚುರುಮುರಿ ಸೇರಿದಂತೆ ಹತ್ತು ಹಲವು ದಿನಸಿ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ.
ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮೌಲ್ಯದ ಸಾಮಾಗ್ರಿಗಳ ಕಳವು ಆಗಿದೆ ಎಂದು ದೂರು ನೀಡಲಾಗಿದೆ ಎಂದು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ ಪ್ರಜಾಕಿರಣ. ಕಾಮ್ ಗೆ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.