ಯಲ್ಲಾಪುರ prajakiran.com : ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ಸಿಯಾಗಿದ್ದಾರೆ.
ಬಂಧಿತರನ್ನು ಕಲಘಟಗಿಯ ಮೌಲಾಲಿ ತಂದೆ ಮಹ್ಮದ ಸಾಬ್ (37),ಶಿವಮೊಗ್ಗ ಜಿಲ್ಲೆಯ ಸಾಗರದ ಮಹ್ಮದ ಆಸೀಫ್ ಮಹ್ಮದ ಇಲಿಯಾಸ್ (37) ಮತ್ತು ಅತಾವುಲ್ಲಾ ಇಸ್ಮಾಯಿಲ್ಸಾಬ್ ಮಕಾಂದರ (36) ಎಂದು ಗುರುತಿಸಲಾಗಿದೆ.
ಇವರು ಫೆ.9 ರ ರಾತ್ರಿ ಹಾವೇರಿ ಮೂಲದ ಕೃಷ್ಣಾಜಿ ಎಂಬ ಬೈಕ್ ಸವಾರನನ್ನು ಮಲ್ಲಿಕ್ ಹೋಟೆಲ್ ಬಳಿ ಅಡ್ಡಗಟ್ಟಿ ,ಹಲ್ಲೆ ನಡೆಸಿ ಪಿಸ್ತೂಲ್ ತೋರಿಸಿ ಹಣ, ಆಭರಣ ದೋಚಿದ್ದರು.
ಕೃಷ್ಣಾಜಿ ಈ
ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ದರೋಡೆ ಮಾಡಿದ ಮೂರುಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.