*ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಇಂದಿಗೆ ಎಂಟು ವರ್ಷ…..!?*
*ನ್ಯಾಯ ಇಂದಿಗೂ ಮರಿಚಿಕೆ ಕುಟುಂಬದ ಸದಸ್ಯರ ಭಾವನಾತ್ಮಕ ಪತ್ರ ವೈರಲ್*
ಧಾರವಾಡ ಪ್ರಜಾಕಿರಣ. ಕಾಮ್ : ಯೋಗೀಶಗೌಡ ಗೌಡರ ಕೊಲೆಯಾಗಿ ಇಂದಿಗೆ ಎಂಟು ವರ್ಷಗಳ ಕಾಲ ಪೂರೈಸಿದೆ.
ಆದರೆ ಈವರೆಗೂ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಕುಟುಂಬದ ಸದಸ್ಯರ ಕಣ್ಣೀರ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ಬರೆದ ಭಾವನಾತ್ಮಕ ಪತ್ರದ ಸಾರಾಂಶ ಹೀಗಿದೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಬಿಜೆಪಿ ಪಕ್ಷದ ಸದಸ್ಯರಾಗಿದ್ದ ದಿವಂಗತ ಯೋಗೀಶಗೌಡ ಗೌಡರ ಅವರನ್ನು ಅವರದೇ ಮಾಲಿಕತ್ವದ ಸಪ್ತಾಪುರದ ಉದಯ್ ಜಿಮ್ ನಲ್ಲಿ ಇದೇ ದಿನ ಅಂದ್ರೆ ಸರಿಯಾಗಿ ಎಂಟು ವರ್ಷಗಳ ಹಿಂದೆ ಜೂನ್ ಹದಿನೈದು 2016ರಂದು ಭರ್ಬರವಾಗಿ ಕೊಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆದಿರುವುದು ಸಿಬಿಐ ತನಿಖೆ ಮಾಡಿದ ನಂತರ ಬಯಲಿಗೆ ಬಂದಿದೆ.
ನಿಜವಾದ ಆರೋಪಿಗಳ ಮುಖವಾಡ ಕಳಚಿ ನೈಜ ಆರೋಪಿಗಳನ್ನು ಕಂಬಿ ಹಿಂದೆ ತಳ್ಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಇಂದಿಗೂ ನ್ಯಾಯಾಲಯದಲ್ಲಿ ಅರ್ಜಿ ಮೇಲೆ ಅರ್ಜಿ ಹಾಕಿ ಸಮಯ ವಿಳಂಬ ಮಾಡುವ ಮೂಲಕ ತಮ್ಮ ಹಣ, ಅಧಿಕಾರ, ತೋಳ್ಬಲದ ಪ್ರದರ್ಶನ ಮಾಡುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ.
ತ್ವರಿತ ನ್ಯಾಯ ಇಂದಿಗೂ ಮರಿಚಿಕೆಯಾಗಿಯೇ ಉಳಿದಿದೆ.
ಯೋಗೀಶಗೌಡ ಗೌಡರ
ಕೊಲೆ ಮಾಡಿದ ಆರೋಪಿಗಳನ್ನು ಈಗಲಾದರೂ ಈ ದೇಶದ ನ್ಯಾಯಾಂಗ ವ್ಯವಸ್ಥೆ ಶಿಕ್ಷಿಸಲಿ.
ಅವರ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಮಾಡಲಿ.
ಇಂತಿ
ಯೋಗೀಶಗೌಡ ಗೌಡರ ಕುಟುಂಬದ ಸದಸ್ಯರು
ಹಾಗೂ ಗೆಳೆಯರ ಬಳಗ ಮತ್ತು ಅಭಿಮಾನಿಗಳು
ಧಾರವಾಡ
ಇಂದು ಅವರ ಸಹೋದರ ಗುರುನಾಥ ಗೌಡರ ಗೋವನಕೊಪ್ಪದ ತೋಟದ ಮನೆಯಲ್ಲಿ ಎಂಟನೇ ಪುಣ್ಯ ಸ್ಮರಣೆ ಆಚರಿಸಲಾಯಿತು. ಅವರ ತಾಯಿ ತುಂಗಮ್ಮ ನಿಂಗನಗೌಡರ ಮಗನ ನೆನೆದು ಕಣ್ಣೀರು ಹಾಕಿದರು.