ಧಾರವಾಡ ಪ್ರಜಾಕಿರಣ.ಕಾಮ್ : ಕೀಲಿ ಮುರಿದು ಮನೆಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿದ ಘಟನೆ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ರುದ್ರಪ್ಪ ನಾಡಗೌಡ ದೇಸಾಯಿ, ಗಣಪತಿ ಕಿತ್ತೂರ ಎಂಬುವರ ಮನೆಯ ಕೀಲಿ ಮುರಿದು 200 ಗ್ರಾಂ ಅಧಿಕ ಚಿನ್ನದ,25 ತೊಲೆ ಬೆಳ್ಳಿಯ ಆಭರಣ ಮತ್ತು ಲಕ್ಷ ರೂಪಾಯಿಗೂ ಹೆಚ್ಚು ನಗದು ದೋಚಿದ್ದಾರೆ.
ಗ್ರಾಮದ ಇನ್ನೂ ಮೂರು ಮನೆಗಳ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಗ್ರಾಮಕ್ಕೆ ಡಿವೈಎಸ್ ಪಿ ನಾಗರಾಜ, ಪಿಎಸ್ ಐ ನೇತ್ರಾವತಿ ಪಾಟೀಲ ಅವರು, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸಮೇತ ಭೇಟಿ ನೀಡಿದ್ದರು.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.