ರಾಜ್ಯ

ಕೆ ಐ ಎ ಡಿ ಬಿ ಬಹುಕೋಟಿ ಹಗರಣ : 9 ನೇ ಆರೋಪಿ ಬಂಧಿಸಿದ ಸಿ ಐ ಡಿ

*ಕೆ ಐ ಎ ಡಿ ಬಿ ಬಹುಕೋಟಿ ಹಗರಣ : 9 ನೇ ಆರೋಪಿ ಬಂಧನ*

*ಅಶ್ಪಕ್ ದುಂಡಸಿ ಬಲಗೈ ಬಂಟ ಜಾಕೀರ್  ಅರೆಸ್ಟ್*

ಧಾರವಾಡ ಪ್ರಜಾಕಿರಣ.‌ಕಾಮ್ :  ಕೆ ಐ ಎ ಡಿ ಬಿ ಬಹುಕೋಟಿ ಹಗರಣದ  ಕಿಂಗ್ ಪಿನ್ ಮೆಹಬೂಬ್ ಅಲಿಯಾಸ್
ಅಶ್ಫಕ್ ಅಲ್ಲಾಭಕ್ಷ ದುಂಡಸಿಯ ಬಂಧನದ ಬೆನ್ನಲ್ಲೇ ಸಿಐಡಿ ಅಧಿಮಾರಿಗಳ ತಂಡ ಕೋಟಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದ ಕೆ ಐ ಎ ಡಿ ಬಿ ಏಜೆಂಟ್ ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿ ಸಹಚರ ಜಾಕೀರ ಮುಲ್ಲಾ ಅಲಿಯಾಸ್ ಜಕ್ರಿಯಾ ನನ್ನು ಬಂಧಿಸಿದೆ.

ಈತ ಕೆ ಐ ಎ ಡಿ ಬಿ
ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣ ಹೊಡೆದಿದ್ದ ಆರೋಪ ಎದುರಿಸುತ್ತಿದ್ದಾನೆ
ಅಶ್ಪಕ್ ದುಂಡಸಿ ಸಣ್ಣ ವಾರ ಪತ್ರಿಕೆಯೊಂದರ ಹೆಸರಿನಲ್ಲಿ ಕಚೇರಿಗೆ ಕಾಲಿಟ್ಟಿದ್ದ.

ಜಾಕೀರ ಆತನ ಸಹಚರನಾಗಿ ಗುರುತಿಸಿಕೊಂಡು ಕೋಟಿ ಕೋಟಿ ಹಣ ಹಣ ಬಾಚಿದ್ದ ಎಂದು ಸಿಐಡಿ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದೆ.

ಈಗಾಗಲೇ ಸಿಐಡಿ ಒಂಬತ್ತು ಜನರನ್ನು ಬಂಧಿಸಿದ್ದು ಇತ ಒಂಬತ್ತನೆಯ ಬಂಧಿತ ಆರೋಪಿಯಾಗಿದ್ದು,  ಈ ತನಕ ಎಂಟು ಜನರನ್ನು ಜೈಲಿಗಟ್ಟಿದ್ದ ಸಿಐಡಿ ತಂಡ ಕಳೆದ ಹಲವಾರು ದಿನಗಳಿಂದ ಈತನ ಬಗ್ಗೆ ನಿಗಾ ವಹಿಸುವುದರ ಜೊತೆಗೆ ದಾಖಲೆ,ಚಿರಾಸ್ತಿ,ಚರಾಸ್ತಿ ಮಾಹಿತಿ ಕಲೆ ಹಾಕಿದ ಬಳಿಕ ಖೆಡ್ಡಾಕ್ಕೆ ಕೆಡವಿದೆ

ಈತ ಅಶ್ಪಕ್ ಜೊತೆಗೆ ಕೆಐಎಡಿಬಿಯಲ್ಲೇ ಠಿಕಾಣಿ ಹೂಡುತ್ತಾ ಅಧಿಕಾರಿಗಳನ್ನು ಕೋಟ್ಯಾಂತರ ರೂಪಾಯಿ ಹಣದ ಆಮಿಷವೊಡ್ಡಿ ತನ್ನ ಬಲೆಗೆ ಹಾಕಿಕೊಂಡಿದ್ದ ಎನ್ನಲಾಗಿದೆ

60% ಕಮಿಷನ್ ಆಸೆಗೆ ಅಧಿಕಾರಿಗಳ ಜೊತೆ ಶಾಮಿಲಾಗಿ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ
ಎರಡು ಬಾರಿ ಪರಿಹಾರ ಪಡೆದಿದ್ದ.

ಈಗ ಬ್ಯಾಂಕ್‌, ಕೆಐಎಡಿಬಿಯ
ಭ್ರಷ್ಟ ಅಧಿಕಾರಿಗಳನ್ನು, ಮತ್ತು ನಕಲಿ ರೈತರನ್ನು ಹಳ್ಳಕ್ಕೆ ಕೆಡವಿ ಅವರನ್ನೂ ಜೈಲು ಪಾಲು ಮಾಡಿ ಇಂದು ತಾನೂ ಕೂಡ ಜೈಲು ಸೇರಿದ್ದಾನೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *