ಬೆಂಗಳೂರು prajakiran.com :
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಸಿಡಿಯಲ್ಲಿರುವ ಯುವತಿ ದೂರು ದಾಖಲಿಸಿ ಕಾನೂನು ಸಮರ ಸಾರಿದ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಯುವತಿ ಯಾವುದೇ ದೂರು ಕೊಡಲಿ ನಾನು ಹೆದರುವುದಿಲ್ಲ. ಸರಕಾರವನ್ನೇ ಕೆಡವಿದ್ದೇನೆ. ಇದ್ಯಾವ ಲೆಕ್ಕ.
ತನ್ನ ದೇಹವನ್ನು ಜಗತ್ತಿಗೆ ತೋರಿಸಿದವರಿಗೆ ಹೆದರುವ ಪ್ರಶ್ನೇಯೇ ಇಲ್ಲ.
ನಮ್ಮ ಬಳಿಯೂ ಸುಪ್ರೀಂ ಕೋರ್ಟ್ ವಕೀಲರು ಇದ್ದಾರೆ.
ಕಾನೂನು ಹೋರಾಟದಲ್ಲಿ ಯಶ ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ದೊಡ್ಡ ಷಡ್ಯಂತ್ರ. ಸಂತ್ರಸ್ತ್ತೆಯಾಗಿದ್ದರೆ, ಅಂದೆ ದೂರು ದಾಖಲುಸಬಹುದಿತ್ತು ಎಂದು ಗುಡುಗಿದ್ದಾರೆ.
ಇದು ಮಹಾನಾಯಕರ ಪಿತೂರಿ. ಅವರಿಗೆ ಜೈಲಿಗೆ ಕಳುಹಿಸುವರೆಗೆ ವಿರಮಿಸುವುದಿಲ್ಲ.
ಯುವತಿ ಯಾವ ಕೇಸ್ ದಾಖಲಿಸುತ್ತಾಳೋ ದಾಖಲಿಸಿ. ನನ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದರೂ ನಾನು ಕಾನೂನಾತ್ಮಕವಾಗಿ ಹೋರಾಟ ನಡೆಸಲು ಸಿದ್ಧನಿದ್ದೇನೆ.
ಮುಂದಿನ ನಡೆ ಬಗ್ಗೆ ನಮ್ಮವಕೀಲರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.