ಧಾರವಾಡ prajakiran.com : ಧಾರವಾಡ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ರಾಜೇಂದ್ರ ಗೋಖಲೆಯವರು ಭಾನುವಾರ ಪುನಾದಲ್ಲಿರುವ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಅವರು ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ರಾಜೇಂದ್ರ ಗೋಖಲೆ ಅವರು ಪೂನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಭಾನುವಾರ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾಮಾಜಿಕ ಬದುಕಿನಲ್ಲಿ ಗುರುತಿಸಿಕೊಂಡಿದ್ದರು.
ತುರ್ತು ಪರಿಸ್ಥಿತಿಯಲ್ಲಿ ಕೆಲವು ದಿನಗಳ ಜೈಲುವಾಸ ಅನುಭವಿಸಿದ್ದರು.
ತಾವು ನಂಬಿದ ತತ್ವ-ಸಿದ್ಧಾಂತ ಎಂದು ಗುರುತಿಸಿಕೊಂಡಿದ್ದ ರಾಜೇಂದ್ರ ಗೋಖಲೆ ಅವರು ಬಿ.ಎಸ್ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ರಾಜ್ಯದ ಪ್ರಧಾನ ಕಾರ್ಯದರ್ಶಿ ಯಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಕಟ್ಟಿದ್ದದರು.
ಆರ್ ಎಸ್ ಎಸ್ ಹಿನ್ನೆಲೆಯಲ್ಲಿ ಬಂದ ಅವರು ಸರಳ,ಸಜ್ಜನ ರಾಜಕಾರಣಿ ಆಗಿದ್ದರು.
ಅವರು ಕೇಂದ್ರದ ಹಾಲಿ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಚಿವ ದಿ. ಅನಂತಕುಮಾರ್ ಅವರಿಗಿಂತ ಹಿರಿಯರಾಗಿದ್ದರು.
ಆದರೆ, ಹತ್ತು ಹಲವು ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.