ಬೆಳಗಾವಿ prajakiran.com : ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಬಡ ಕಾರ್ಮಿಕರಿಗೆ ವಿತರಿಸಲಾಗುತ್ತಿರುವ ಕಿಟ್ ಗಾಗಿ ಮಹಿಳೆಯರು ಕೇಂದ್ರ ಸಚಿವರ ಕಚೇರಿಗೆ ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಕೇಂದ್ರ ಸಚಿವ ಸುರೇಶ ಅಂಗಡಿ ಕಚೇರಿ ಮುಂದುಗಡೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸಿದ್ದಾರೆ. ಒಂದು ಹಂತದಲ್ಲಿ ಕಿಟ್ ಗಾಗಿ ಜನ ಮುಗಿ ಬಿದ್ದಿದ್ದಾರೆ.
ಸಚಿವರ ಕಚೇರಿಗೆ ಮುತ್ತಿಗೆ ಹಾಕಿದ ಮಹಿಳೆಯರು ಉಚಿತ ಪಡಿತರ ಕಿಟ್ ಪಡೆಯಲು ತಂಡೊಪ ತಂಡವಾಗಿ ಆಗಮಿಸುತ್ತಿದ್ದು, ನಮಗೆ ಕಿಟ್ ಸಿಕ್ಕಿಲ್ಲ ಕೊಡಿ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ದುರಂತ ಹಾಗೂ ಅಚ್ಚರಿಯ ಸಂಗತಿಯೆಂದರೆ ಮಹಿಳೆಯರು ಕರೋನಾದ ಯಾವುದೇ ಭಯವಿಲ್ಲದೆ, ಸಾಮಾಜಿಕಅಂತರ ಮರೆತು ಮಾಸ್ಕ್ ಧರಿಸದೆ, ಹಿರಿಯ ನಾಗರಿಕರು ಆದಿಯಾಗಿ ಪೈಪೋಟಿಗೆ ಇಳಿದಿರುವುದು ಕಂಡು ಬಂತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸುರೇಶ ಅಂಗಡಿ, ಪೊಲೀಸರು ಹೇಳಿದರೂಕೇಳುವ ಪರಿಸ್ಥಿತಿ ಇಲ್ಲ. ಕೈ ಮುಗಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಅಸಹಾಯಕತೆ ತೋರಿಸಿದರು.
ಮಹಿಳೆಯರು ಈ ರೀತಿಯಾಗಿ ಗುಂಪುಗುಂಪಾಗಿ ಆಗಮಿಸುತ್ತಿರುವುದು ನೋಡಿ ಖುದ್ದು ಸಚಿವರೇ ಹೌಹಾರಿದ್ದಾರೆ. ಕಾರ್ಮಿಕ ಇಲಾಖೆಯ ಕಿಟ್ ವಿತರಣೆ ಬೆಳಗ್ಗೆ ಕೂಡ ವಿತರಿಸಲಾಗಿತ್ತು.