ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು
ಕೋಲಾರ prajakiran.com : ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಮಾಹಾಮಾರಿ ಅಟ್ಟಹಾಸ ಇತ್ತೀಚಿಗೆ ನರಸಾಪುರ ಹೋಬಳಿಯ ಚಾಕರಸನಹಳ್ಳಿ, ಉದ್ದಪನಹಳ್ಳಿಗೆ ಬಂದಿದ್ದ ಕೊರೋನಾ ಮಾಹಾಮಾರಿ ಈಗ ನರಸಾಪುರಕ್ಕೂ ಕಾಲಿಟ್ಟಿದೆ.
ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ ಒಬ್ಬ ವ್ಯಕ್ತಿಗೆ ಕೊರೋನ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಈ ವ್ಯಕ್ತಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 20ಕ್ಕೂ ಹೆಚ್ಚಿನ ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ ಯಾಗಿರುವುದು ಜನರನ್ನ ಬೆಚ್ಚಿಬೀಳಿಸಿದೆ.
ನರಸಾಪುರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಸ್ಯಾನಿಟೈಸರ್ ಮಾಡಿದರು. ಜೊತೆಗೆ ಸದರಿ ಪ್ರದೇಶವನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸಿದ್ದಾರೆ.
ಅಷ್ಟೇ ಅಲ್ಲದೇ ಸದರಿ ಪ್ರದೇಶ 14 ದಿನಗಳು ಸೀಲ್ ಡೌನ್ ಆಗಿರುತ್ತದೆ ಎಲ್ಲಾ ಸಾರ್ವಜನಿಕರು ಎಚ್ಚರಿಕೆ ಇರಬೇಕು ಎಂದು ತಿಳಿಸಿದ್ದಾರೆ.
ನರಸಾಪುರ ಗ್ರಾಮದಲ್ಲಿ ಬೆಳಿಗ್ಗೆ 6 ರಿಂದ 2 ಗಂಟೆಗೆ ವರೆಗೆ ಮಾತ್ರ ಹಾಲು, ಹಣ್ಣು ತರಕಾರಿ, ದಿನಸಿ ಅಂಗಡಿ ತೆರೆಯಲು ಅನುಮತಿ ನೀಡಿದೆ (ಸೀಲ್ ಡೌನ್ ಪ್ರದೇಶ ಹೊರತುಪಡಿಸಿ) ನಂತರ ಎಲ್ಲಾ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು.
ಯಾರು ಸಹ ತಳ್ಳುವ ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಗ್ರಾಮಪಂಚಾಯತಿ ವತಿಯಿಂದ ತಿಳಿಸಿದ್ದಾರೆ.