ಒಂದು ಕೊಠಡಿಯಲ್ಲಿ 12, ಡೆಸ್ಕಿಗೊಬ್ಬನೇ ವಿದ್ಯಾರ್ಥಿ
ಬೆಂಗಳೂರು prajakiran.com : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿದ ಬೆನ್ನಲ್ಲೆ ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಈ ಹಿನ್ನೆಲೆ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಬಿಡುಗಡೆಯಾಗಿದೆ.
ಈ ವಿಧಾನದನ್ವಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್ಒಪಿಯನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ.
ಇದರ ಅನ್ವಯ ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ. ಡೆಸ್ಕ್ನಲ್ಲಿ ಒಬ್ಬರು ಮಾತ್ರ ಕುಳಿತು ಪರೀಕ್ಷೆ ಬರೆಯಬೇಕು.
ವಿದ್ಯಾರ್ಥಿಗಳು ಗುಂಪು ಕೂರುವಂತಿಲ್ಲ. ಮನೆಯಿಂದಲೂ ಊಟ ಹಾಗೂ ನೀರು ತರಬೇಕು.
ಪರೀಕ್ಷೆಯಲ್ಲಿ ಭಾಗಿಯಾಗುವ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಕನಿಷ್ಠ ಒಂದು ಡೋಸ್ ಆದರೂ ಲಸಿಕೆ ಪಡೆದಿರಬೇಕು ಎಂದು ಎಸ್ಒಪಿಯಲ್ಲಿ ಸೂಚಿಸಲಾಗಿದೆ.
ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪೀಠೋಪಕರಣ ಹಾಗೂ ಶೌಚಾಲಯ ಸ್ಯಾನಿಟೈಸ್ ಮಾಡಬೇಕು.
ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ಯಾನಿಟೈಸರ್ ನೀಡಬೇಕು. ಕೆಮ್ಮು ಜ್ವರ ಅಥವಾ ಯಾವುದೇ ಕೊರೋನಾ ಲಕ್ಷಣಗಳಿರುವ ಮಕ್ಕಳಿಗೆಂದು ಎರಡು ವಿಶೇಷ ಕೊಠಡಿ ಕಾಯ್ದಿರಿಸಬೇಕು ಎಂದರು.