ರಾಜ್ಯ

ಧಾರವಾಡದಲ್ಲಿ ಮತ್ತೊಂದು ಮಹಾಯಡವಟ್ಟು ಮಾಡಿದ ಆರೋಗ್ಯ ಇಲಾಖೆ

ಧಾರವಾಡ prajakiran.com : ಕೊರೊನಾ ಸೋಂಕಿತನೊಬ್ಬ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ಧಾರವಾಡ ಆರೋಗ್ಯ ಇಲಾಖೆ ಮಾಹಿತಿ ನೀಡುವ ಮೂಲಕ ಮಹಾಯಡವಟ್ಟು ಮಾಡಿದೆ.

ಹಿಂದೆ ಧಾರವಾಡದ ಕೊಟ್ಟಣದ ಓಣಿ, ಹೆಬ್ಬಳ್ಳಿ ಗ್ರಾಮಗಳಲ್ಲಿ ಯಡವಟ್ಟು ಮಾಡಿಕೊಂಡ ನಂತರ ಇದೀಗ ಜೀವಂತ ಇರುವ ವ್ಯಕ್ತಿಯೇ ಸತ್ತನೆಂದು ಮಾಹಿತಿ ನೀಡಿ, ಮೇಲೆ ತಪ್ಪಾಗಿದೆ ಎಂದು ವಿವರಣೆ ನೀಡಿದೆ.

ಹೌದು ನಿನ್ನೆ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಪಿ-18708, 62 ವರ್ಷದ ಪುರುಷ ಸೋಂಕಿನಿಂದ ಅಸುನೀಗಿದ್ದಾನೆ ಎಂದು ಮಾಹಿತಿ ನೀಡಿತ್ತು. ವಿಷಯ ಗೊತ್ತಾದ ವ್ಯಕ್ತಿಯ ಮನೆಯವರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಈ ಸಂಬಂಧ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಲಘಟಗಿ  ತಾಲೂಕಿನ ಹಿರೇಹೊನ್ನಳ್ಳಿಯ ಗಣೇಶನಗರ ನಿವಾಸಿಯಾಗಿರುವ ಪಿ-18708 ಅವರು ಮೃತಪಟ್ಟಿದ್ದಾರೆ ಎಂದು  ಕಣ್ತಪ್ಪಿನಿಂದಾಗಿ ನಮೂದಾಗಿದೆ.

ಇದಕ್ಕಾಗಿ ಆರೋಗ್ಯ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಈ ವ್ಯಕ್ತಿ ಗುಣಮುಖರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *