ಧಾರವಾಡ Prajakiran.com: ಶತಮಾನ ಸಮೀಪಿಸಿದ ಧಾರವಾಡದ ಸಮಾಜ ಪುಸ್ತಕಾಲಯ ಹಾಗೂ ಸರಸ್ವತಿ ಅಪಸೆಟ್ ಪ್ರಿಂಟರ್ಸ್ ಗೆ ಮಾಜಿ ಸಚಿವ ಸಂತೋಷ ಲಾಡ್ ಅವರು ಭಾನುವಾರ ಸಂಜೆ ಭೇಟಿ ನೀಡಿದರು.
ಈ ವೇಳೆ ಅದರ ಮಾಲೀಕರಾದ ಜಗದೀಶ್ ಗಾಣೇಕರ್ ಅವರೊಂದಿಗೆ
ಉಭಯ ಕುಶಲೋಪರಿ ನಡೆಸಿ, ಸಮಾಜ ಪುಸ್ತಕಾಲಯದ ಮಾಹಿತಿಯನ್ನು ಪಡೆದರು.
ಅಲ್ಲದೆ, ಬರುವ ದಿನಗಳಲ್ಲಿ ಇ ಲೈಬ್ರರಿ ಆರಂಭಿಸುವಂತೆ ಸಲಹೆ ನೀಡಿದರು.
ನಾಡಿನ ಜನತೆಗೆ ಕಳೆದ ಹಲವು ದಶಕಗಳಿಂದ ಅತ್ಯುತ್ತಮ ಮುದ್ರಣ ಹಾಗೂ ಗುಣಮಟ್ಟದ ವಿನ್ಯಾಸ ನೀಡುತ್ತಿರುವುದರ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಅಜ್ಜನ ಕಾಲದಲ್ಲಿ ಆರಂಭಗೊಂಡ ಈ ಬೃಹತ್ ಸಂಸ್ಥೆಯನ್ನು ಮೂರನೇ ತಲೆ ಮಾರಿನ ಜಗದೀಶ್ ಗಾಣೇಗರ ಅವರು ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಮುಕ್ತ ಕಂಠದಿಂದ ಪ್ರಶಂಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.