ರಾಜ್ಯ

ಧಾರವಾಡದ ಸಮಾಜ ಪುಸ್ತಕಾಲಯಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಭೇಟಿ

ಧಾರವಾಡ Prajakiran.com:  ಶತಮಾನ ಸಮೀಪಿಸಿದ ಧಾರವಾಡದ ಸಮಾಜ ಪುಸ್ತಕಾಲಯ ಹಾಗೂ ಸರಸ್ವತಿ ಅಪಸೆಟ್ ಪ್ರಿಂಟರ್ಸ್ ಗೆ ಮಾಜಿ ಸಚಿವ ಸಂತೋಷ ಲಾಡ್ ಅವರು ಭಾನುವಾರ ಸಂಜೆ ಭೇಟಿ ನೀಡಿದರು.

ಈ ವೇಳೆ ಅದರ ಮಾಲೀಕರಾದ ಜಗದೀಶ್ ಗಾಣೇಕರ್ ಅವರೊಂದಿಗೆ
ಉಭಯ ಕುಶಲೋಪರಿ ನಡೆಸಿ, ಸಮಾಜ ಪುಸ್ತಕಾಲಯದ ಮಾಹಿತಿಯನ್ನು ಪಡೆದರು.

ಅಲ್ಲದೆ, ಬರುವ ದಿನಗಳಲ್ಲಿ ಇ ಲೈಬ್ರರಿ ಆರಂಭಿಸುವಂತೆ ಸಲಹೆ ನೀಡಿದರು.

ನಾಡಿನ ಜನತೆಗೆ ಕಳೆದ ಹಲವು ದಶಕಗಳಿಂದ ಅತ್ಯುತ್ತಮ ಮುದ್ರಣ ಹಾಗೂ ಗುಣಮಟ್ಟದ ವಿನ್ಯಾಸ ನೀಡುತ್ತಿರುವುದರ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಅಜ್ಜನ ಕಾಲದಲ್ಲಿ ಆರಂಭಗೊಂಡ ಈ ಬೃಹತ್ ಸಂಸ್ಥೆಯನ್ನು ಮೂರನೇ ತಲೆ ಮಾರಿನ ಜಗದೀಶ್ ಗಾಣೇಗರ ಅವರು ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಮುಕ್ತ ಕಂಠದಿಂದ ಪ್ರಶಂಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *