ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿ ಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಐ ಡಿ ಬಿ ಐ ಮ್ಯಾನೇಜರ್ ಹಾಗೂ ಕ್ಲರ್ಕ್ ಮತ್ತು ತಂದೆಗೆ ಗೊತ್ತಿಲ್ಲದ ಹಾಗೆಯೇ 64 ಲಕ್ಷ ಡ್ರಾ ಮಾಡಿದ್ದ ಮಗನನ್ನು ಬಂಧಿಸಿದ ಬೆನ್ನಲ್ಲೇ ಕೆ ಐ ಎ ಡಿ ಬಿ ಯ ಮ್ಯಾನೇಜರ್ ಎಂ.ಕೆ. ಸಿಂಪಿಯನ್ನು ಸಿಐಡಿ ಅಧಿಕಾರಿಗಳ ತಂಡ ಬಲೆಗೆ ಕೆಡುವುದರಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಮಹಾದೇವಪ್ಪ ಸಿಂಪಿ ಅಲಿಯಾಸ್ ಎ.ಕೆ. ಸಿಂಪಿ ಈ ಪ್ರಕರಣದ ಎ 2 ಆರೋಪಿಯಾಗಿದ್ದರು. ಇದೀಗ ಸಿಐಡಿಯು ನಾಲ್ಕನೇ ಆರೋಪಿಯನ್ನಾಗಿಸಿ ಬಂಧಿಸಿ ಕಂಬಿಯ ಹಿಂದೆ ತಳ್ಳಿದೆ.
ಕೆ ಐ ಎ ಡಿ ಬಿಯ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ್ ತಳವಾರ ಹಾಗೂ ಎಜೆಂಟ್ ಅಶ್ಫಕ್ ದುಂಡಸಿಯನ್ನು ಮೊನ್ನೆ ಸಿಐಡಿ ಅಧಿಕಾರಿಗಳು ದಿನವೀಡಿ ಡ್ರೀಲ್ ಮಾಡಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದರು.
ಅದರ ಬೆನ್ನಲ್ಲೇ ಕೆ ಐ ಎ ಡಿ ಬಿ ಮ್ಯಾನೇಜರ್ ಎಂಕೆ.ಸಿಂಪಿ ಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.
ಈ ಪ್ರಕರಣದ ಸಿ ಐ ಡಿ ತನಿಖೆ ನಡೆಸಲು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಒತ್ತಾಯಿಸಿ, ಸಿಎಂ ಹಾಗೂ ಲೋಕಾಯುಕ್ತರ ಮುಂದೆ ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.