ಧಾರವಾಡ ಪ್ರಜಾಕಿರಣ.ಕಾಮ್ : ದುಡ್ಡು ತೆಗೆದುಕೊಂಡು ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ನೈತಿಕತೆ ಇದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ
ಬಹಿರಂಗ ಸವಾಲು ಹಾಕಿದರು.
ಅವರು ಮಂಗಳವಾರ ರಾತ್ರಿ ಮದಿಹಾಳದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಸಮಾವೇಶದಲ್ಲಿ ಮಾತನಾಡಿ ವಾಗ್ದಾಳಿ ನಡೆಸಿದರು.
ಅವರೇ ಬೇಕಿದ್ದರೆ ವೇದಿಕೆ ಸಿದ್ದಪಡಿಸಲಿ. ಇಲ್ಲದಿದ್ದರೆ ನಾನೇ ಜಿಲ್ಲೆಯ ಹೊರಗಡೆ ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಬರ್ತಿನಿ.ನೇರ ಚರ್ಚೆಗೆ ಬರಲು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ಅವರು ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ದಾರಿ ತಪ್ಪಿಸಲು ನಮಗೆ ಯಾವ ರೀತಿ ಯಾರ ಮೂಲಕ ಒತ್ತಡ ಹೇರಿದ್ದರು ಎಂಬುದು ಬಹಿರಂಗಪಡಿಸಬೇಕಾಗುತ್ತದೆ ಎಂದು ಕುಟುಕಿದರು.
ಅಲ್ಲದೆ, ಯಾರ ಮೂಲಕ ಎಷ್ಟು ಕೋಟಿ ಯ ಆಮಿಷ ಒಡ್ಡಿದ್ದರು ಎಂಬುದು ಅವರಿಗೂ ಗೊತ್ತಿದೆ. ಅಂದ ನಾವು ಏನಾದರೂ ಅವರು ತೋರಿಸಿದ ಕೋಟ್ಯಾಂತರ ಹಣದ ಮುಖ ನೋಡಿದ್ದರೆ ಇಂದು ಅವರು ಜಿಲ್ಲೆಯಿಂದ ಹೊರಗಡೆ ಇರ್ತಿರಲಿಲ್ಲ. ಪಾಪ ಅವರು ಹತಾಶರಾಗಿ ಇಂತಹ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಗುಡುಗಿದರು. ಆದರೆ ನಾವು ಏನ್ ಇದ್ದೀವಿ ಹೇಂಗ್ ಇದ್ದಿವಿ ಎಂಬುದು ಇಡೀ ಕ್ಷೇತ್ರ, ಜಿಲ್ಲೆಯ ಹಾಗೂ ರಾಜ್ಯದ ಜನತೆಗೆ ಗೊತ್ತಿದೆ ಎಂದು ಛೇಡಿಸಿದರು.
ಅವರು ಒಂದು ಕಡೆ ನ್ಯಾಯಾಲಯದ ಮೇಲೆ ಅಪಾರ ಗೌರವವಿದೆ ಎಂದು ಹೇಳ್ತಾರೆ.ಇನ್ನೊಂದು ಕಡೆ ಬಿಜೆಪಿಯವರು ಸಿಕ್ಕಿಸಿದ್ದಾರೆ ಎಂದು ಹೇಳ್ತಾರೆ. ಇವರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ ಎಂದು ಚಾಟಿ ಬೀಸಿದರು.
ಧಾರವಾಡದ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್ ನವರೆಗೆ ಹತ್ತು ಹಲವು ಬಾರಿ ತೀವ್ರ ಹಿನ್ನಡೆ ಅನುಭವಿಸಿದ ಮೇಲು ಬುದ್ದಿ ಭೇಟಿ ಆಗಿಲ್ಲ ಅಂದ್ರೆ ಎನ್ ಮಾಡುವುದು ಎಂದು ತಿರುಗೇಟು ನೀಡಿದರು.
ಹೌದು ಇಷ್ಟು ದಿನ ನಾನು ಧಾರವಾಡದ ಹಾಲಿ ಶಾಸಕರ ವಿರುದ್ದ ಕ್ಷೇತ್ರದ ಜನರ ಧ್ವನಿಯಾಗಿ ಹೋರಾಡಿದ್ದೇನೆ. ಧಾರವಾಡ ಜಿಲ್ಲೆಯ ಲೋಕಸಭಾ ಸದಸ್ಯರು ಆಗಿರುವ ಕೇಂದ್ರದ ಪ್ರಭಾವಿ ಸಚಿವರಾದ ಪ್ರಹ್ಲಾದ ಜೋಶಿ ಅವರು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಾವಿರಾರು ಜನರ ಸಮ್ಮುಖದಲ್ಲಿ ಭರವಸೆ ನೀಡಿದ್ದಾರೆ. ಹೀಗಾಗಿ ಎಲ್ಲಾ ಜನರ ಒಪ್ಪಿಗೆ ಪಡೆದು ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಹೊರತು ಹಣದ ಆಮಿಷಕ್ಕೆ ಬಲಿಯಾಗುವ ವ್ಯಕ್ತಿ ನಾನಲ್ಲ ಎಂದು ಕುಟುಕಿದರು.
ಸುಖಾ ಸುಮ್ಮನೆ ಆರೋಪ ಮಾಡಿದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಆ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ. ಒಂದು ಸಲ ಮಾತನಾಡಿದ್ದಕ್ಕೆ ಇಷ್ಟು ಅನುಭವಿಸುತ್ತಿದ್ದಿರಿ. ಮತ್ ಮತ್ ಮಾತನಾಡಿದರೆ ನಿಮಗೆ ಒಳ್ಳೆಯದಾಗಲ್ಲ ಎಂದು ಜನಜಾಗೃತಿ ಸಂಘ ದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಕೆ ನೀಡಿದರು.