ನವದೆಹಲಿ ಪ್ರಜಾಕಿರಣ. ಕಾಮ್ : ರಾಜ್ಯದ ಬಹುನಿರೀಕ್ಷಿತ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣೆ ಆಯೋಗದ ಆಯುಕ್ತ ರಾಜೀವ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿ ಆಗಲಿದ್ದು, ಚುನಾವಣೆಗೆ 2600 ಫೈಲಿಂಗ್ ಸ್ಕಾಡ್, 2400 ವೀಕ್ಷಕರ ನೇಮಕ ಮಾಡಲಾಗಿದ. 19 ಜಿಲ್ಲೆಯಲ್ಲಿ 171 ಚೆಕ್ ಪೋಸ್ಟ್ ಹಾಕಲಾಗಿದೆ ಎಂದು ವಿವರಿಸಿದರು.
ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಲಾಗುವುದು. ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು 20 ಏಪ್ರಿಲ್
ಕೊನೆಯ ದಿನವಾಗಿದೆ.
ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಯಲಿದೆ.
ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ.
ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಏಕಕಾಲಕ್ಕೆ ಮೇ 10ರಂದು ಮತದಾನ ನಡೆಯಲಿದೆ. ಹಾಗೂ ಮೇ 13ರಂದು ಮತ ಏರಿಕೆ ನಡೆಯಲಿದೆ ಎಂದು ರಾಜೀವ ಕುಮಾರ್ ತಿಳಿಸಿದರು.
224 ಕ್ಷೇತ್ರದ ಪೈಕಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿವೆ.
ರಾಜ್ಯದಲ್ಲಿ ಮತದಾರರು
5,23,63,948 ಇದ್ದು
ಪೊಸ್ಟಲ್ ಮತದಾರರ ಸಂಖ್ಯೆ
47,609ಒಟ್ಟು ಮತದಾರರು
5,24,11,557 ಇದ್ದಾರೆ.
18+ ಯುವ ಮತದಾರರು :
9,58,806
ವಿಕಲಚೇತನರು 5,60,908
ತೃತೀಯ ಲಿಂಗಿಗಳು :4751
(80+) ಹಿರಿಯ ನಾಗರಿಕರು
12,15,142 ಎಂದು ವಿವರಿಸಿದರು.