ಹುಬ್ಬಳ್ಳಿ prajakiran.com : ರಾಜಕಾರಣಿಗಳಿಗೆ ನೈತಿಕತೆ ಮುಖ್ಯ. ಅದರಲ್ಲೂ ವಿಶೇಷವಾಗಿ ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ. ನಮ್ಮನ್ನು ಅನುಕರಣೆ ಮಾಡುವ ಜನ ಇರುತ್ತಾರೆ. ಹೀಗಾಗಿ ನಾವು ಗೌರವದಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅವರು ಶನಿವಾರ ಮಾಜಿ ಸಚಿವ ರಮೇಶ ಸಿಡಿ ಪ್ರಕರಣದ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದರು.
ಸಾರ್ವಜನಿಕ ಬದುಕಿನಲ್ಲಿದ್ದವರೂ ಗೌರವಯುತವಾಗಿ ಇರಬೇಕು. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದರು.
ಇನ್ನೂ ಆರೋಗ್ಯ ಸಚಿವ ಸುಧಾಕರ್ ರವರ ಏಕಪತ್ನಿ ವೃತಸ್ಥ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಸುಧಾಕರ್ ಹೇಳಿಕೆ ಸರಿಯಲ್ಲ.
ಆ ರೀತಿ ಹೇಳಿಕೆ ಕೊಡಬಾರದಿತ್ತು. ಬೇರೆಯವರನ್ನು ನೋಡಿ ನಾವು ಅನುಸರಿಸುವುದಲ್ಲ.
ನಮಗೆ ನಾವು ಸರಿಯಾಗಿ ಇರಬೇಕು ಎಂದು ಅವರು ಹೇಳಿದರು.
ಬೆಳಗಾವಿ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ.
ನರೇಂದ್ರ ಮೋದಿ, ಸುರೇಶ ಅಂಗಡಿಯರು ಮಾಡಿದ ಅಭಿವೃದ್ದಿ ಕೆಲಸದ ಮೇಲೆ ಚುನಾವಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.