ಬೆಂಗಳೂರು prajakiran.com : ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿಯನ್ನು ಬಂಧಿಸುವುದು ಬಿಟ್ಟು ಬಿಜೆಪಿ ಸರಕಾರ ನವರಂಗಿ ಆಟ ಆಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ವಾರ್ ಮಾಡಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೇಂಡಿಂಗ್ ಆಗಿದ್ದು, ಅನೇಕರು ಬಹಿರಂಗವಾಗಿ ಛೀ ಮಾರಿ ಹಾಕುತ್ತಿದ್ದಾರೆ.
ಗೃಹ ಸಚಿವ ಬವಸರಾಜ ಬೊಮ್ಮಾಯಿ ಆರೋಪಿಯನ್ನು ಭೇಟಿಯಾಗುವ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ರವಾನಿಸುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ತರಹದ ರಕ್ಷಣಾತ್ಮಕ ಆಟ ಆಡುವುದನ್ನು ಮೊದಲು ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿ. ಈಗಾಗಲೇ ರಮೇಶ ವಿರುದ್ದ ಪೊಲೀಸ್ ಠಾಣೆಯಲ್ಲು ದೂರು ದಾಖಲಾಗಿದೆ ಎಂದು ಗುಡುಗಿದೆ.
ಆರೋಪಿಯನ್ನು ಬಂಧಿಸುವ ಬದಲಿಗೆ ಭದ್ತತೆ ಹೆಚ್ಚಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಕಿಡಿಕಾರಿದ್ದಾರೆ.
ಇದು ಬಿಜೆಪಿ ಕಾಂಗ್ರೆಸ್ ಪಕ್ಷದ ನೆಉವೆ ಟ್ವೀಟ್ ವಾರ್ ಗೆ ವೇದಿಕೆ ಯಾಗಿದ್ದು ತೀವ್ರ ಜಟಾಪಟಿ ನಡೆಯುತ್ತಿದೆ.