ಧಾರವಾಡ prajakiran.com : ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದುಗುರುತಿಸಿಕೊಂಡಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸತತವಾಗಿ ಮೂರನೇ ಪ್ರಭಾರಿ ಕುಲಪತಿಗಳು ನಿನ್ನೆ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಪ್ರೊ. ಪ್ರಮೋದ ಗಾಯಿ ಅವರು ನಿವೃತ್ತರಾದ ನಂತರಅವರ ಸ್ಥಾನಕ್ಕೆ ಹಿರಿಯ ಪ್ರಾಧ್ಯಾಪಕರೆಂಬ ಸೇವಾ ಹಿರಿತನ ಆಧಾರದ ಮೇಲೆ ಪ್ರೊ. ಶಿರಾಳಶೆಟ್ಟಿ ಅವರನ್ನು ನೇಮಿಸಲಾಗಿತ್ತು.
ಅವರ ಸೇವಾ ನಿವೃತ್ತಿ ನಂತರಅವರ ಜಾಗಕ್ಕೆ ಡಾ. ಟಿ.ಎಂ. ಭಾಸ್ಕರ ಅವರನ್ನು ನಿಯೋಜಿಸಲಾಗಿತ್ತು. ಇದೀಗಅವರ ಸೇವಾ ನಿವೃತ್ತಿ ನಂತರ ಮೂರನೇ ಪ್ರಭಾರಿ ಕುಲಪತಿಗಳಾಗಿ ಪ್ರೊ. ಶಿವಪ್ಪ ನೇಮಕಗೊಂಡಿದ್ದಾರೆ.
ಹೀಗೆ ವಿಶ್ವವಿದ್ಯಾಲಯಕ್ಕೆ ಪ್ರಭಾರಿ ಕುಲಪತಿಗಳ ನೇಮಕ ಮುಂದುವರೆದಿರುವುದು ವಿಶ್ವವಿದ್ಯಾಲಯದ ಹಾಗೂ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಅತಿಥಿ ಉಪನ್ಯಾಸಕರಿಗೆ ಹಾಗೂ ಸಮರ್ಥ ಆಡಳಿತಕ್ಕೆ ಸ್ವಲ್ಪ ಹಿನ್ನಡೆಯಾಗಲಿದೆಯೇ ಎಂಬಅನುಮಾನ ವಿಶ್ವವಿದ್ಯಾಲಯದಲ್ಲಿಯೇ ನಡೆದಿದೆ.
ಯಾವುದಾದರೂ ದಿಟ್ಟ ಹೆಜ್ಜೆ ಇಡಲು ಇದು ಅನುಕೂಲಕ್ಕಿಂತಅನಾನುಕೂಲವೇ ಹೆಚ್ಚಾಗಲಿದೆ ಎಂದು ಕೇಳಿಬರುತ್ತಿದೆ.
ಒಬ್ಬ ಸಮರ್ಥ ಹಾಗೂ ಸದೃಢ ಆಡಳಿತಾಧಿಕಾರಿಯನ್ನು ನೇಮಿಸಲು ಸರಕಾರಕ್ಕೆ ಆಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ನೂತನ ಹಾಗೂ ಮೂರನೇ ಪ್ರಭಾರಿ ಕುಲಪತಿಗಳಾಗಿ ಪ್ರೊ. ಶಿವಪ್ಪ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದು, ಅವರು ಜುಲೈ 1ರಂದು ಬುಧವಾರ ಪ್ರಭಾರಿ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಪ್ರೊ. ಶಿವಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ, ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಖಾಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಕುಲಸಚಿವರಾದ ಡಾ. ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನದ ಕುಲಸಚಿವರಾದ ಪ್ರೊ. ರವೀಂದ್ರನಾಥ ಎನ್. ಕದಂ, ಪ್ರಭಾರಿ ಹಣಕಾಸು ಅಧಿಕಾರಿಗಳಾದ ಪ್ರೊ. ಆರ್.ಆರ್. ಬಿರಾದಾರ ಹಾಗೂ ವಿವಿಧ ನಿಖಾಯದ ಡೀನರುಗಳು, ಸಿಂಡಿಕೇಟ್ ಸದಸ್ಯರು ಸಾಕ್ಷಿಯಾದರು.