ಧಾರವಾಡ prajakiran.com : ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಆದ್ಯತೆ ಈಗ ಏನಿದ್ದರೂ ಕೋವಿಡ್ ನಿಯಂತ್ರಣ ಮಾತ್ರ. ಸದ್ಯಕ್ಕೆ ಸಿಎಂ ಮತ್ತು ನಾಯಕತ್ವ ಬದಲಾವಣೆ ಇಲ್ಲ ಎಂದರು.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿಯೂ ಯಾವುದೇ ಚರ್ಚೆ ನಡೆದಿಲ್ಲ.
ನಾನು ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ಕೇವಲ ವದಂತಿ ಎಂದರು.
ನಾನು ಪ್ರಧಾನಿ ನರೇಂದ್ರ ಮೋದಿಯವರಂತಹ ಶ್ರೇಷ್ಠ ನಾಯಕರ ಅಡಿಯಲ್ಲಿ ಕೆಲಸ ಮಾಡುತ್ತಿರುವುದು
ಬಹಳ ಸಂತೋಷ ಮತ್ತು ಅಭಿಮಾನದಿಂದ ಸಂಗತಿ ಎಂದು ಹೇಳಿದರು.
ರಾಜರಲ್ಲಿ ಸಿಎಂ ಯಡಿಯೂರಪ್ಪವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.
ಆದ್ದರಿಂದ ಇದೆಲ್ಲವೂ ಉಹಾಪೋಹಗಳು ಮಾತ್ರ ಎಂದರು.
ಸಿಎಂ ಹೇಳಿಕೆ ವಿಚಾರ ನಿನ್ನೆಯೇ ಮುಗಿದ ಅಧ್ಯಾಯವಾಗಿದೆ. ನನ್ನ ಕೇಂದ್ರ ಸ್ಥಾನ ಇರೋ ಕಾರಣಕ್ಕೆ ದೆಹಲಿಗೆ ಹೊರಟಿರುವೆ.
ಆದರೆ ಯಡಿಯೂರಪ್ಪ ಯಾವ ಹಿನ್ಮೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೂ ಅವರ ಹೇಳಿಕೆಗೆ ಬೇರೆ ಅರ್ಥ ಏನೂ ಇಲ್ಲ.
ಅವರನ್ನು ಬದಲಿಸುವ ವಿಚಾರವಿಲ್ಲ. ಈ ಕುರಿತು ಯಾವುದೇ ರೀತಿಯ ಸಹಿ ಸಂಗ್ರಹದ ಅಗತ್ಯ ಇಲ್ಲ ಅಲ್ಲದೇ ಯಾರೂ ಅದನ್ನು ಮಾಡಬಾರದು ಎಂದು ಕೇಂದ್ರ ಸಚಿವ ಜೋಶಿ ಸಲಹೆ ನೀಡಿದರು.